Posts

Showing posts with the label British Dakshin Kannada

ಸರ್ ಜಾನ್ ಸ್ಟರಕ್ : ಕಲೆಕ್ಟರ್ ಆಫ್ ಸೌತ್ ಕೆನರಾ

Image
ಸರ್ ಜಾನ್ ಸ್ಟರಕ್ , ಈ ಹೆಸರು ಮಂಗಳೂರಿನ ಇಂದಿನ ಪೀಳಿಗೆಗೆ ಕಡಿಮೆ ಪರಿಚಯ.18 ನೇ ಶತಮಾನದಲ್ಲಿ ಕರಾವಳಿ ಜಿಲ್ಲೆಯನ್ನು ಆಳಿದ ಬ್ರಿಟೀಷ್ ಅಧಿಕಾರಿ.ಜಿಲ್ಲಾ ಕಲೆಕ್ಟರರಾಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು.1881 ರಲ್ಲಿ ಕರಾವಳಿಯ ಈ ಭಾಗ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿದ್ದ ಈ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿ ಸ್ಟರಕ್ ಅವರು ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಅವರು ಈ ಜಿಲ್ಲೆಯಲ್ಲಿ ಅನೇಕ ಕಡೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. 1866-67 ರಲ್ಲಿ ಅವರು ಸೌತ್ ಕೆನರಾ ಜಿಲ್ಲೆಯ ಎಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕವಾಗಿದ್ದರು. ( ಮಂಗಳೂರು ಹಳೇ ಬಂದರಿನಲ್ಲಿನ ಸ್ಟರಕ್ ವೃತ್ತ) 1873 ರಲ್ಲಿ ಸೌತ್ ಕೆನರಾ ಮತ್ತು ಮೈಸೂರು ಜಿಲ್ಲೆಗಳ ಮಹತ್ವದ ಗಡಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ 750 ರೂಪಾಯಿಗಳ ವಿಶೇಷ ಸಂಭಾವನೆಯೊಂದಿಗೆ ಅವರನ್ನು ಕಮೀಶನರ್ ಆಗಿ ಬ್ರೀಟಿಷ್ ನೇಮಕ ಮಾಡಿತ್ತು.ಸ್ಥಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಇಲ್ಲಿನ ಸ್ಥಳಿಯ ಭಾಷೆಯ ಅಗತ್ಯತೆಯನ್ನು ಕಂಡು, ಅವರು ಕನ್ನಡ, ತುಳು ಭಾಷೆಯನ್ನು ಕಲಿತರು ಮಾತ್ರವಲ್ಲ ನಿರರ್ಗಳವಾಗಿ ಮಾತಾಡುತ್ತಿದ್ದರು. ತುಳು ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬ್ರಾಹ್ಮಣರಿಂದ ತುಳು ಭಾಷೆಯನ್ನು ಕಲಿತರು. ಈ ಹಿನ್ನೆಲೆಯಲ್ಲಿ 1872 ರಲ್ಲಿ ಕನ್ನಡ ಭಾಷಾ ಅನುವಾದಕರಾಗಿ ಸರ್ಕಾರದಿಂದ ನೇಮಕಗೊಂಡರ...

ಈ ಜಮೇದಾರ ಬ್ಯಾಜ್ ಗೆ 2 ಶತಮಾನಗಳ ಇತಿಹಾಸ..!!

Image
ದಕ್ಷಿಣ ಕನ್ನಡ ಸೇರಿದಂತೆ ಭಾರತದಲ್ಲಿ ಬ್ರಿಟೀಷರು ಆಳ್ವಿಕೆ ನಡೆಸಿದ್ದು ಇದೀಗ ಇತಿಹಾಸ. ಈಗ ಕಾಣುವುದು ಅವರು ಬಿಟ್ಟು ಹೋದ ಪಳೆಯುಳಿಕೆ ಮಾತ್ರ.ನಮ್ಮ ಸಂವಿಧಾನವು ನಮ್ಮದೇ ಆದ ರೂಪು ರೇಷೆಗಳನ್ನು ಹಾಕಿಕೊಂಡು ಆಡಳಿತ ನಡೆಸುತ್ತಿದೆ.ಆದರೆ ಕೆಲವೊಂದು ಪದ್ದತಿಗಳು, ನಿಯಮಗಳು ಮಾತ್ರ ಆ ಕಾಲದಿಂದ ಇಂದಿಗೂ ಕ್ರಮಬದ್ದವಾಗಿ ನಡೆಯುತ್ತ ಬಂದಿವೆ.ಇದಕ್ಕೆ ಸಾಕ್ಷಿ ಕಳೆದ 200 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಚಲಾವಣೆಯಲ್ಲಿರುವ 'ಜಮೇದಾರ ಬ್ಯಾಜ್'.1799 ರ ಜುಲೈ 8 ರಂದು ಮೇಜರ್ ಮುನ್ರೋ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಜಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2010 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಜಿಲ್ಲಾಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ.1816 ರಲ್ಲಿ ಬ್ರಟೀಷ್ ಅಧಿಕಾರಿ ತೋಮಸ್ ಹ್ಯಾರಿಸ್ ಅವರು 5 ನೇ ಜಿಲ್ಲಾ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅವರಿಗೆ ಈ ಬ್ಯಾಜ್ ನ ಐಡಿಯ ಬಂದು 1822 ರಲ್ಲಿ ಆತ ಜಾರಿಗೆ ತಂದೇ ಬಿಟ್ಟ.ಅಂದಿನಿಂದ ಕಲೆಕ್ಟರರ ಜವಾನರಾಗಿ ಕೆಲಸ ನಿರ್ವಹಿಸುವವರು ಖಡ್ಡಾಯವಾಗಿ ಈ ಬ್ಯಾಜ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದಿಗೂ ಚಾಲ್ತಿಯಲ್ಲಿದೆ. ಅಮದು ಜಿಲ್ಲಾಧಿಕಾರಿ ಕರ್ತವ್ಯ ನಿಮಿತ್ತ ಏಲ್ಲೇ ಹೋದರೂ ಈತ ಆತನನ್ನು ಹಿಂಬಾಲಿಸಬೇಕಿತ್ತು. ಇದೀಗ ಕಾಲ ಬದಲಾಗಿದೆ,ಆಡಳಿತ ಶೈಲಿಯೂ ಬದಲಾಗಿದೆ. ಈ ಕರ್ತವ್ಯ ನಿರ್ವಹಿಸುವ ಜಮೇದಾರ ಜಿಲ...