Monday, January 15, 2018

ಪ೦ಜೆ ಮ೦ಗೇಶರಾಯರು

ಪ೦ಜೆ ಮ೦ಗೇಶರಾಯರು 1874-1937 


ಮಂಗೇಶರಾಯರು   1874 ಫೆಬ್ರುವರಿ 22 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ  ಜನಿಸಿದರು.
ಇವರ ತಾಯಿ ಹೆಸರು ಶಾಂತಾದುರ್ಗಾ, ಅಪ್ಪ ರಾಮಪ್ಪಯ್ಯ.
ಪ್ರಾಥಮಿಕ ವಿದ್ಯಾಭಾಸವ ಬಂಟ್ವಾಳಲ್ಲಿಯೇ ಮುಗುಸಿದರು. ಮುಂದೆ ಮಂಗಳೂರಿಗೆ ಆಗಮಿಸಿ ಸಣ್ಣಮಕ್ಕಳಿಗೆ  ಪಾಠ ಹೇಳಿಕೊಟ್ಟುಗೊಂಡು ವಿದ್ಯಾಭ್ಯಾಸವ ಮುಂದುವರಿಸಿದರು.
1890 ರಲ್ಲಿ ಅವರ ಅಪ್ಪ ತೀರಿಹೋಪ ಸಮಯಲ್ಲಿ ಮಂಗೇಶರಾಯರಿಂಗೆ ಹದಿನಾರು ವರ್ಷದ ಪ್ರಾಯ.ಸಂಸಾರದ ಜೆವಾಬ್ದಾರಿ ಇವರ ಹೆಗಲಿಗೆ ಬಂತು. ತಾನು ಕಲಿತು ತಮ್ಮಂದಿರಿಗೂ ವಿದ್ಯಾರ್ಜನೆ ಮಾಡಿದರು. 1894 ರಲ್ಲಿ ಬೆನಗಲ್ ರಾಮರಾಯರ  ಸಹೋದರಿ ಭವಾನಿಬಾಯಿಯೊಂದಿಗೆ ಇವರ ವಿವಾಹ ಆಯಿತು.ಕಾಲೇಜಿನ ಪ್ರಥಮ ವರ್ಷದ ಎಫ್.ಏ.(ಆರ್ಟ್ಸ್)ಪಾಸು ಮಾಡಿ, ಕನ್ನಡ ವಿಶಿಷ್ಟ ಪರೀಕ್ಷೆಯನ್ನೂ ಪಾಸು ಮಾಡಿದರು.1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಲಿ ಜೂನಿಯರ್ ಕನ್ನಡ ಪಂಡಿತ ಹುದ್ದೆ ಪಡೆದರು. ವಿಶೇಷ ಎಂದರೆ ಇದೇ ಹುದ್ದೆಗೆ ‘ಕವಿ ಮುದ್ದಣ’ನೂ ಅರ್ಜಿ ಹಾಕಿದ್ದರು. ಆದರೆ ರಾಯರಿಗೆ ಇಂಗ್ಳೀಷಿನ ಜ್ಞಾನ ಇದ್ದ ಕಾರಣ ಈ ಹುದ್ದೆ ಇವರಿಗೆ ಸಿಕ್ಕಿತ್ತು. ಮುದ್ದಣ ಮುಂದೆ ಉಡುಪಿಯ ಸರಕಾರಿ ಕಾಲೇಜು  ಸೇರಿದರು ಮುಂದೆ ಬಿ.ಎ. ಪರೀಕ್ಷೆ ಪಾಸು ಮಾಡಿ, ಮದ್ರಾಸಿಗೆ ಹೋಗಿ ಅಲ್ಲಿ ಎಲ್.ಟಿ.ಪದವಿಯ ಪಡದು ವಾಪಾಸು ಮಂಗ್ಳೂರಿಗೆ ಬಂದು ಉಪಾಧ್ಯಾಯರಾಗಿ ಮುಂದುವರಿದರುಮುಂದೆ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್ಪೆಕ್ಟರ್ ಹುದ್ದೆಗೆ ನೇಮಕಗೊಂಡರು. ಮುಂದೆ ಅವರು ಉಪಾದ್ಯಾಯರ ತರಬೇತಿ ಶಾಲೆ ಪ್ರಾಂಶುಪಾಲರಾದರು. ಹಲವು ವರ್ಷ ದಕ್ಷಿಣ ಕನ್ನಡದ ಸಂಪರ್ಕಲ್ಲಿದ್ದ ಪಂಜೆ , 1921 ರಲ್ಲಿ ಕೊಡಗಿನ ಶಾಲಾ ಇನ್ಸ್ ಪೆಕ್ಟರಾಗಿ ಮಡಿಕೇರಿಗೆ ಬಂದರು. ಎರಡು ವರ್ಷದ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಮುಂದುವರಿದರು. ಬ್ರೀಟಿಷರನ್ನು ಗೌರವಿಸಿಗೊಂಡಿದ್ದ ಕೊಡಗಿನ ಜನ, ಸ್ಥಳೀಯ ಒಬ್ಬ ಉನ್ನತ ಹುದ್ದೆಲಿ ಇಪ್ಪದರ ಇಷ್ಟ ಪಡದ ಕಾರಣ ಆ ಗೌರವ ಭಾವನೆ ಪಂಜೆಯವರ ಕಂಡಿರಲಿಲ್ಲ. ಕೊಡಗಿನ ಜನ ರಾಯರ ಔದಾರ್ಯಲ್ಲಿ ಕಾಣದ್ದರೂ,ಕೊಡಗಿನ ಪರಿಸರ,ಪ್ರಕೃತಿಯ ಸೊಬಗು, ಜೆನರ ಸಾಹಸವ ಮನಗಂಡು, ಹೃದಯ ಬಿಚ್ಚಿ ಹಾಡಿ ಹೊಗಳಿದವು. “ಹುತ್ತರಿ ಹಾಡು” ಹೆಸರಿನ ಈ ಪದ್ಯ ಮುಂದೆ ಕೊಡಗಿನ ‘ನಾಡಗೀತೆ‘ ಯಾಗಿ ಪ್ರಸಿದ್ದಿ ಆತು.ಕೊಡಗಿನ, ಕೊಡವರ ಸೌಂದರ್ಯ- ಸಾಹಸವ ವರ್ಣಿಸುವ ಈ ಗೀತೆ ಒಂದು ಶ್ರೇಷ್ಟ ಗೀತೆಯಾಗಿ, ಒಂದು ಉತ್ಸವ ಗೀತೆಯ ಹಾಂಗೆ, ಗಮಕಕ್ಕೆ, ವಾಚನಕ್ಕೆ ಹೇಳಿ ಮಾಡಿಸಿದ ಹಾಂಗಿದ್ದು..
1934 ರಲ್ಲಿ ರಾಯಚೂರಿಲಿ ನಡದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಪದವಿ ಪಂಜೆ ಮಂಗೇಶ ರಾಯರಿಗೆ ಒಲಿದು ಬಂತು. ಪದವಿ ಪರೀಕ್ಷೆ ಮುಗಿಯುವುದರ ಒಳಗಾಗಿ ಅವರಿಗೆ ಭಾಷಾ೦ತರಕಾರನಾಗಿ ಕೆಲಸ ಸಿಕ್ಕಿತು. ತಿ೦ಗಳಿಗೆ  ಇಪ್ಪತ್ತು ರೂಪಾಯಿ ಪಗಾರ.  ನ೦ತರ ಅವರು ಶಾಲಾ ಇನ್ಸಪೆಕ್ತರರಾಗಿ ನೇಮಕಗೊ೦ಡಾಗ ಊರೂರು ಅಲೆದಾಡಬೇಕಾಯ್ತು  . ಒ೦ದು ಎತ್ತಿನ ಗಾಡಿಯಲ್ಲಿ ಅಡುಗೆ ಸಾಮಾನು, ಪಾತ್ರೆ-ಪಗಡ ತು೦ಬಿಕೊ೦ಡೇ ಅವರು ಊರೂರು ತಿರುಗಾಡಿದರು. ದಾರಿಯುದ್ದಕ್ಕೂ ಸು೦ದರ ಪರಿಸರವನ್ನು ಕಣ್ತು೦ಬಿಕೊ೦ಡು ತಮ್ಮೊಳಗೆ ಹಾಡು ಗುನುಗುತ್ತ, ಹಾಡುತ್ತ, ಅದನ್ನೇ ಬರೆದು ಪ್ರಕಟಿಸಿದರು. ಅವರು ಬರೆದುದೆಲ್ಲವೂ ಅಪ್ಪಟ ಅಪರ೦ಜಿ. ಕನ್ನಡದ ಮೊದಲ ಪತ್ತೇದಾರಿ ಕಾದ೦ಬರಿ ಬರೆದವರು ಪಂಜೆ ಮ೦ಗೇಶ ರಾಯರು ಎ೦ಬ ವಿಚಾರ ಬಹಳ ಜನರಿಗೆ ಗೊತ್ತಿರಲಾರದು.  ಶಿಕ್ಷಣ ಪದ್ಧತಿ, ವ್ಯಾಕರಣ. ಭೂಗೋಳ, ಇತಿಹಾಸ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆಯೂ ಗಹನವಾದ ಸಾಹಿತ್ಯ ರಚಿಸಿದರು.
ಅವರು ಬರೆದ "ನಾಗರ ಹಾವೇ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ತಾವೇ" ಹಾಡಿಗೆ ಭರ್ತಿ ನೂರು ವರ್ಷ ಸ೦ದಿದೆ. ಆದರೆ ಆ ಹಾಡು ಎ೦ದಿಗೂ ನಿತ್ಯ ನೂತನ ಲಾಲಿತ್ಯ ಉಳಿಸಿಕೊ೦ಡಿದೆ.  ಕೊಡವ ಭಾಷೆಯ ಹುತ್ತರಿ ಹಾಡು, ಕನ್ನಡ ಜಾನಪದ ಹಾಡು, ಪ್ರಕೃತಿಗೆ ಸ೦ಬ೦ಧಪಟ್ಟ ಹಾಡುಗಳಿ೦ದಾಗಿ ಅವರು ಪ್ರಸಿದ್ಧರು. ಅವರು ಬರೆದ ಹಾಡು ಸುಶ್ರಾವ್ಯವಾಗಿ ಕೇಳುವುದೇ ಚೆಂದ.  ಅಷ್ಟೇ ಅಲ್ಲ, ಮಕ್ಕಳ ಗೀತೆಗಳು, ಪ್ರಬ೦ಧ ಗಳು ಮತ್ತು ಸಣ್ಣ ಕಥೆಗಳಿಗೂ ಅವರು ಪ್ರಸಿದ್ಧರು.   ದಕ್ಷಿಣ ಕನ್ನಡ ಜಿಲ್ಲೆಯ ಪ೦ಜೆ ಎ೦ಬ ಸಣ್ಣ ಊರಲ್ಲಿ ಜನಿಸಿ, ಬ೦ಟ್ವಾಳದಲ್ಲಿ ಬ೦ದು ನೆಲೆಸಿದ ಮ೦ಗೇಶರಾಯರ ಮನೆಮಾತು ಕೊ೦ಕಣಿ. ಆದರೆ ಹೃದಯದ ಭಾಷೆ ಕನ್ನಡ.  ಎಳವೆಯಲ್ಲಿಯೇ ತ೦ದೆಯನ್ನು ಕಳೆದು ಕೊ೦ಡು ತಾಯಿಯ ಪ್ರೀತಿಯಲ್ಲಿ ಬೆಳೆದ ಮ೦ಗೇಶ  ರಾಯರು ಬ೦ಟ್ವಾಳದ ಸಮೀಪ ಹರಿಯುವ ನೇತ್ರಾವತಿ ನದಿ ಪರಿಸರದಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ತಮ್ಮೊಳಗೆ ಹಾಡುತ್ತ, ಗುನುಗುತ್ತ ಇದ್ದ ಸಾಲುಗಳು ಕನ್ನಡದ ಅಪರೂಪದ ಮತ್ತು ಅಪೂರ್ವ ಗೀತೆಗಳಾಗಿದ್ದು ಇತಿಹಾಸ.
ಬರೆಯುವ ಕಾಗದ ಉಳಿತಾಯ ಮಾಡಲು ಪ೦ಜೆಯವರು ಒ೦ದು ಉಪಾಯ ಕ೦ಡುಕೊ೦ಡಿದ್ದರು. ಒ೦ದು ಪುಟ ಬರೆದಾದ ನ೦ತರ, ಪುಟವನ್ನು ತಿರುವು ಮುರುವು  ಮಾಡಿ ಸಾಲುಗಳ ಮಧ್ಯೆ ಮತ್ತೆ ಬರೆಯುತ್ತಿದ್ದರು. ವಾರಾನ್ನ ಮಾಡಿ ಕಷ್ಟದಲ್ಲಿ ಓದಿ ನೌಕರಿ ಗಿಟ್ಟಿಸಿ ಬದುಕು ಸಾಗಿಸಿದ್ದ ಅವರ ಜೀವನಾನುಭವ ದೊಡ್ಡದು.  ೧೯೩೪ ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರದಾಗಿತ್ತು. ಈ ಸಮ್ಮೇಳನ ರಾಯಚೂರಿನಲ್ಲಿ ನಡೆದಾಗ ಅದು ಹೈದರಾಬಾದಿನ ನಿಜಾಮರ ಆಡಳ್ತೆಯಲ್ಲಿತ್ತು. ಪಂಜೆ ಮಂಗೇಶರಾಯರು 1937 ಅಕ್ಟೋಬರ 24 ರಂದು ತಮ್ಮ 63 ರ ಪ್ರಾಯಲ್ಲಿ ನಿಧನರಾದರು. ನ್ಯುಮೋನಿಯಾ ಕಾಯಿಲೆಯಿ೦ದ ಬಳಲಿ ಮರಣವನ್ನಪ್ಪಿದ ಮ೦ಗೇಶರಾಯರು ಕನ್ನಡ ಸಾಹಿತ್ಯ ಲೋಕ ಎ೦ದೂ ಮರೆಯದ ಛಾಪನ್ನು ಮೂಡಿಸಿ ಹೋಗಿದ್ದಾರೆ. ಮಂಗಳೂರಿನ ನಗರದ ಒಂದು ರಸ್ತೆಗೆ ಪಂಜೆ ಮಂಗೇಶ ರಾಯ ರಸ್ತೆಯಾಗಿ ಹೆಸರಿಡಲಾಗಿದೆ.

Friday, June 16, 2017

Papal visit Mangalore after 25 years

Mangalore:The day exactly 25 years ago (February 6, 1986) was a very special for Mangaloreans, especially the Christians, with approximately five lakh people gathering at Bajpe to have a glimpse of Pope John Paul II, the first and only Pope to visit Karnataka.

Divine presence Pope John Paul II addressing the gathering during his visit to Bajpe near Mangalore on Feburary 6, 1986. Though the Pope was scheduled to visit Bangalore that year, the venue was changed to Mangalore, also known as the “Rome of the East,” as the atmosphere in Bangalore was not conducive.
People cutting across religious and caste lines thronged the venue, near the Bajpe airport, from every nook and corner of the State and outside the State, for the only engagement of the Pope in Karnataka.
‘People saw God’Many people who had witnessed the historic event attended the special mass on Sunday. Alwyn Noronha, a teacher at St Joseph PU College in Bajpe, and a 10th Standard student then said he felt he was “seeing God” when he saw the Pope. Noronha and his friends reached the venue well before 10 am for the Papal visit scheduled for 2.30 pm.
Businessman V U Seemon, who chauffeured the Pope from the airport to the venue in an open jeep, said it was the most memorable occasion of his life. Stating that he was on “Cloud Nine”, he said he could never forget the “divine” smile on the face of the Pope.
“I can’t explain the divine vibration I had when I was near the Pope,” he says and adds: “You have to experience it to know it.”
Pope memorial:
Thousands of Christians gathered at the same venue near Bajpe on Sunday (06-02-2011) to celebrate the silver jubilee of the Papal visit to the Port City.
Offering a special mass, Mangalore Diocese Bishop Rev Dr Aloysius Paul D’Souza recalled the Papal visit and his message — “to live like a true Christian and to live harmoniously.” The Bishop also installed a bust of Pope John Paul II at the memorial site.
Earlier, Catholics took out a huge procession to the venue simultaneously from three different areas. The announcement by Pope Benedict XVI that he will beatify Pope John Paul II on May 1, 2011, at St Peter’s Square in Rome doubled the joy for the Catholic community.

 2014 in Febuary 
A shrine  built at Bajpe, about 25 kms from the city honouring Pope John Paul II, with support of devotees of Mangalore Diocese at a cost Rs 1.5 crore. It was built at the place where Pope addressed a humongous gathering of four lakh plus on February 6, 1986. 


 A shrine  built at Bajpe, about 25 kms from the city honouring Pope John Paul II, with support of devotees of Mangalore Diocese at a cost Rs 1.5 crore. It was built at t A shrine  built at Bajpe, about 25 kms from the city honouring Pope John Paul II, with support of devotees of Mangalore Diocese at a cost Rs 1.5 crore. It was built at the place where Pope addressed a humongous gathering of four lakh

First man who landed in Mangalore Airport

First man who landed in Mangalore Airport.
War hero Vonthibettu Prabhakar Hegde made the first-ever landing in Mangalore, 59 years ago. His passenger: India’s first prime minister Jawaharlal Nehru . He tells Rajul Hegde the airport is tricky but not unsafe.
War hero and pioneering aviator Vonthibettu Prabhakar Hegde won’t forget December 25, 1951, for as long as he lives.On that day the retired wing commander, now a spry 84, then an air force flight lieutenant, flew India first prime minister Jawaharlal Nehru on the first-ever flight to Mangalore airport (then called Bajpe Aerodrome) on a DC-3 (Dakota).Talking about the maiden flight from his home in Bangalore, Wing Commander Hegde told us, “When I landed for the first time at Bajpe, they were just digging and levelling the hill to build the runway. So it was just a non-tarmac, level ground, there was no airport as such. But the DC-3 is a small aircraft and it was easy for me to land it.”On being asked Nehru’s observation or if he commented on the airport or the landing, he said, ”He would not comment on the technicalities of the flight or landing because he knew we were experienced. He just shook hands and thanked us after the landing.”

He adds, “Nehru came to campaign for India’s first democratic elections. There was hardly any equipment at the airport to help during the landing. It was not difficult for me to land on a table-top ‘runway’ because I was experienced in flying to Kashmir, which had a similar airport.”
When asked about Saturday’s air crash in Mangalore, he says, “This talk about it being a dangerous or unsuitable airport has no basis. The airport has functioned without a major mishap for nearly six decades. It just cannot suddenly become a ‘dangerous’ airport. If anything advances in technology and equipment has only made flying safer.”
The veteran aviator says, “The plane could have crashed due to an error of judgment while landing. Or it’s possible the captain allowed the co-pilot, who was also experienced, to land. Something must have gone wrong and before they could act or correct it, the plane must have crashed. Now they have recovered the black box and I hope they get more information and causes of the crash will be clear.”
When asked if landing in Mangalore is difficult, he said, “I don’t think so. But yes it is a tricky airport because it’s a table-top and doesn’t have flat ground around it. But experienced pilots can land easily on table-top airports.”
Wing Commander Hegde flew for the Indian Air Force for 24 years and retired in 1968. He was awarded the Vir Chakra, India’s third-highest gallantry award, for outstanding services rendered as an IAF squadron leader during the Kashmir operations in the Indo-Pakistan War of 1947.

Saturday, July 30, 2016

ಅಪ್ರತಿಮ ದೇಶ ಭಕ್ತ ' ಜಾರ್ಜ್ ಫರ್ನಾಂಡೀಸ್ '

ಜಾರ್ಜ್  ಫರ್ನಾಂಡೀಸ್  ನಂತಹ ಮನವತಾವಾದಿ, ಅಪ್ರತಿಮ ದೇಶ ಭಕ್ತ , ಛಲಗಾರ ಮತ್ತು ಸಾಮಾಜಿಕ ಹಾಗೂ ಧೀಮಂತ ರಾಜಕರಣಿ ಯನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಇಂತಹ ಮಹಾನ್ಮಾ ನಾಯಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್  ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದು
  ಇದ್ದೂ ಇಲ್ಲಂದಂಥ ಸ್ಥಿತಿಯಲ್ಲಿದ್ದಾರೆ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಅತ್ಯುತ್ತಮ ವಾಗ್ಮಿ ಹೀಗೆ ಏನೆಲ್ಲ ವಿಶೇಷಣಗಳನ್ನು ನೀಡಿದರೂ ಜಾರ್ಜ್‌ಗೆ ಅನ್ವರ್ಥಕವಾಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ತಾವು ನಂಬಿದ ಸಿದ್ಧಾಂತವನ್ನು ತ್ಯಜಿಸದೇ ಅವರು ರಾಜಕೀಯ ಜೀವನದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು. ಹಾಗಂತ, ಸುಮ್ಮನೆ ಸಿಕ್ಕ ಅಥವಾ ಪಡೆದ ಅಧಿಕಾರದಲ್ಲಿ ವಿಜೃಂಭಿಸಿ ಇಳಿಯಲಿಲ್ಲ. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಹೆಗ್ಗಳಿಕೆ.ಹೀಗೆ ಜಾರ್ಜ್ ಫರ್ನಾಂಡೀಸ್ ಫುಟ್ ಪಾತಿನಿಂದ ಹಲವಾರು ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದವರು.
               ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಜೂನ್ ೩, ೧೯೩೦ರ ವರ್ಷದಲ್ಲಿ ಮಂಗಳೂರಿನಲ್ಲಿ ಜನಿಸಿದರು. 1930 ಜೂನ್ 3  ರಂದು ಮಂಗಳೂರಿನ ಕ್ಯಾಥೋಲಿಕ್ ಕುಟುಂಬದ ಜೊಸೇಫ್ ಫರ್ನಾಂಡಿಸ್ ಮತ್ತು ಅಲಿಸ್ ಮಾರ್ಥಾ ಫರ್ನಾಂಡಿಸ್ ಅವರ 6 ಮಕ್ಕಳಲ್ಲಿ ಜಾರ್ಜ್ ಹಿರಿಯರು. ಈ ಸಂಪ್ರದಾಯಸ್ಥ ಕುಟುಂಬ ಜಾರ್ಜ್ ಅವರನ್ನು ಎಸ್ ಎಸ್ ಎಲ್ ಸಿ ಓದಿದ ನಂತರ ಪಾದ್ರಿ ತರಬೇತಿಗಾಗಿ ಬೆಂಗಳೂರಿಗೆ ಕಳುಹಿಸಿತು.ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವೆತ್ಯಯದಿಂದ ಜಿಗುಪ್ಸೆಕೊಂಡು ಹೊರಬಂದರು. ಜಾರ್ಜ್ ಒಳಗೆ ಒಬ್ಬ ಹೋರಾಟಗಾರ ಜಾಗೃತಗೊಂಡಿದ್ದು ಇದೇ ಅವಧಿಯಲ್ಲಿ. ಪಾದ್ರಿ ತರಬೇತಿಯನ್ನು ಬಿಟ್ಟು ಮುಂಬೈಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ!. ಮಹಾ ನಗರಿ ಮುಂಬೈಯಲ್ಲೂ  ಅವರಿಗೆ ಪರಿಚಯದವರಿರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳ ಬದಿಯ ಫುಟ್ ಪಾತ್ ಗಳಲ್ಲೇ ಮಲಗಿ ರಾತ್ರಿ ಕಳೆದದ್ದೂ ಇದೆ. ನಂತರದ ದಿನಗಳಲ್ಲಿ  ಸ್ಥಳೀಯ ಪತ್ರಿಕೆಯೊಂದರಲ್ಲಿ  ಫ್ರೂಫ್ ರೀಡರ್ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು.

ಈ ಹಂತದಲ್ಲಿ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು ಅರವತ್ತರ ದಶಕದಲ್ಲಿ ಅವರು ಮುಂಬಯಿನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು. ೧೯೬೧ರಿಂದ ೧೯೬೮ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. ೧೯೬೭ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು. ಕಾರ್ಮಿಕ ಚಳವಳಿಯಲ್ಲಿ ಜಾರ್ಜ್ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಇದೇ ಅವರನ್ನು 1961ರ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆಯ್ಕೆಯಾಗುವಂತೆ ಮಾಡಿತು. 6 ವರ್ಷದ ಬಳಿಕ ದಕ್ಷಿಣ ಬಾಂಬೆ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಗಿಳಿದರು. ಅವರ ಎದುರಾಳಿಯಾಗಿದ್ದವರು ಕಾಂಗ್ರೆಸ್‌ನ ಅಂದಿನ ಜನಪ್ರಿಯ ನಾಯಕ ಎಸ್.ಕೆ. ಪಾಟೀಲ್. ಸಾಧಾರಣ ಮನುಷ್ಯ ಜಾರ್ಜ್ ಅವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಪಾಟೀಲ್ ಅವರನ್ನು ಜಾರ್ಜ್ ಪರಾಭವಗೊಳಿಸಿದ್ದರು. ಆಗಲೇ ಇವರಿಗೆ '"George, The Giant Killer'ಎಂಬ ನಿಕ್‌ನೇಮ್ ಅಂಟಿಕೊಂಡದ್ದು.!
ಹೀಗೆ ಜಾರ್ಜ್ ರಾಜಕೀಯ ಉನ್ನತಿ ಸಾಧಿಸುತ್ತ ಸಾಗಿದರು. 1974ರ ಹೊತ್ತಿಗೆ ಜಾರ್ಜ್ ಮನೆ ಮಾತಾದರು. ಕ್ರಮೇಣವಾಗಿ ಮುಂಬಯಿನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ಥಬ್ಧವೆನಿಸಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಆಗ ಅಕ್ಷರಶಃ ದೇಶ 'ಸ್ಥಗಿತ'ವಾಗಿತ್ತು. ಈ ಮುಷ್ಕರಕ್ಕೆ ಉದ್ಯಮ ವಲಯದ ಎಲ್ಲ ವಿಭಾಗಗಳಿಂದಲೂ ಅಪಾರ ಬೆಂಬಲ ದೊರೆಕಿತ್ತು. ಮೂರು ವಾರಗಳ ಈ ಭಯಂಕರ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಅಭದ್ರತೆ ಹುಟ್ಟಿಸಿತು. ಇದೇ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದ Movement for changeಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದರು. ಇದೆಲ್ಲದರ ಫಲವಾಗಿ ಅಂತಿಮವಾಗಿ ಇಂದಿರಾ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಬಿಟ್ಟರು. ಪ್ರತಿಪಕ್ಷ ನಾಯಕರನ್ನೆಲ್ಲ ಬಂಧಿಸಿ ಸೆರೆಮನೆಗೆ ಅಟ್ಟಲಾಯಿತು.ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ 'ಸಂಸ್ಕಾರ' ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರಿಗೆ ಅನಾರೋಗ್ಯವಿದ್ಧಾಗಿಯೂ ಬಂಧಿಸಿ ತೊಂದರೆಗೊಳಪಡಿಸಿದರು.

  ಇತ್ತ ಜಾರ್ಜ್ ಫರ್ನಾಂಡೀಸ್ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ನೇಯ್ದಿದ್ದರು. ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಣಾಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೆರೆಸಿಕ್ಕ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತು. ಆಗ ಜಾರ್ಜ್ ಮತ್ತು ಅವರ ಜತೆಗಿದ್ದವರು ಭೂಗತರಾದರು. ಬರೋಡಾದಿಂದ ಡೈನಮೈಟ್ ತಂದು ಕಚೇರಿಗಳನ್ನು ಸ್ಫೋಟಿಸುವ ಯೋಜನೆ ಹಾಕಿಕೊಂಡರು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಬಂಧನಕ್ಕೊಳಗಾದರು. ಸರ್ಕಾರಿ ಕಚೇರಿಗಳನ್ನು ಸ್ಫೋಟಿಸಲು ಡೈನಮೈಟ್ ಕದ್ದ ಆರೋಪವನ್ನು ಜಾರ್ಜ್ ಮೇಲೆ ಹೊರಿಸಿ ಬಂಧಿಸಲಾಯಿತು. ಇದೇ ಮುಂದೆ 'ಬರೋಡಾ ಡೈನಮೈಟ್‌' ಪ್ರಕರಣ ಎಂದು ಪ್ರಸಿದ್ಧಿಯಾಯಿತು. ಯಾವುದೇ ಚಾರ್ಜ್‌ಷೀಟ್ ಇಲ್ಲದೆಯೇ ಅವರನ್ನು 9 ತಿಂಗಳು ತಿಹಾರ್ ಜೈಲಿನಲ್ಲಿಡಲಾಯಿತು. ಅಲ್ಲಿಂದಲೇ ಅವರು ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಇಷ್ಟಕ್ಕೆಲ್ಲ ಕಾರಣ ಜಾರ್ಜ್ ಅವರನ್ನು ಬಂಧಿಸಿದ ಕ್ಷಣದಲ್ಲಿ ಅವರ ಕೋಳ ತೊಟ್ಟು ಕೈ ಮೇಲೆತ್ತಿದ್ದ ಫೋಟೋ!
ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸೋತು ಸುಣ್ಣವಾದರೆ, ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ ನಾಯಕರೆಲ್ಲರನ್ನೂ ಬಿಡುಗಡೆ ಮಾಡಲಾಯಿತು. ಜಾರ್ಜ್ ಅವರು ಈ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾದರು. ಜಾರ್ಜ್ ಎಷ್ಟು ಖಡಕ್ ಆಗಿದ್ದರೆಂದರೆ ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕದ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾದರು. ಅವೆರಡೂ ಕಂಪನಿಗಳು ಭಾರತವನ್ನು ಬಿಟ್ಟು ಹೊರಡಬೇಕಾಯಿತು. ಮುಂದೆ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೇಲ್ವೆ ಸಚಿವರಾಗಿ ಕೊಂಕಣ ರೇಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಇಂದು ಮುಂಬೈಗೆ ಅತೀ ಕಡಿಮೆ ಅವಧಿ ಮತ್ತು ಕಡಿಮೇ ದರದಲ್ಲಿ ರೈಲು ಪ್ರಯಾಣ ಮಾಡುತ್ತೇವೆ ಆದರೆ ಅದಕ್ಕೆ ಮೂಲ ಕಾರಣ ಕರ್ತರು ಇದೇ ಜಾರ್ಜ್ ಫೆರ್ನಾಂಡಿಸ್ ! ಅಷ್ಟೊತ್ತಿಗೆ ಒಂದಾಗಿದ್ದ ಕಾಂಗ್ರೆಸ್ಸೇತರ ನಾಯಕರೆಲ್ಲ ಒಡೆದು ಚಿಲ್ಲಾಪಿಲ್ಲಿಯಾದರು. ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಮಂಗಳೂರಿನ ಬಿಜೈ ನ್ಯೂ ರೋಡ್ ನಲ್ಲಿ ಅವರ ಕಚೇರಿ ಇದ್ದು, ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಭೇಟಿ ನೀಡದೇ ಹೋದದ್ದ ಬಹಳ ಅಪರೂಪ. ರಾಜಕೀಯ ಅನಿವಾರ್ಯತೆಯ ಪರಿಸ್ಥಿತಿಯಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಜತೆ ಕೈಜೋಡಿಸಬೇಕಾಯಿತು. ಅಷ್ಟೇ ಅಲ್ಲ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‌ಡಿಎ) ಸಂಚಾಲಕರೂ ಆದರು. 1998ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಜಾರ್ಜ್ ಅವರು ದೇಶದ ರಕ್ಷಣಾ ಸಚಿವರಾದರು. ವಿಪರ್ಯಾಸವೆಂದರೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾರ್ಜ್ ಅಣ್ವಸ್ತ್ರ ವಿರೋಧಿಸುತ್ತಲೇ ಬಂದಿದ್ದರು. ಆದರೂ, ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿತು. ಮುಂದೊಂದು ದಿನ ಅದನ್ನು ಅವರು ಸಮರ್ಥಿಸಿಕೊಂಡರು ಕೂಡಾ. ಆದರೆ, ರಕ್ಷಣಾ ಸಚಿವರಾಗಿದ್ದಾಗ ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಅವರನ್ನು ಕಂಗೆಡಿಸಿದವು. ಮಂತ್ರಿ ಸ್ಥಾನವನ್ನೂ ಬಿಟ್ಟುಕೊಡಬೇಕಾಯಿತು. ಆದರೆ, ತನಿಖೆಯ ನಂತರ ಅವರು ಶುದ್ಧಹಸ್ತರು ಎಂದು ತೀರ್ಮಾನವಾದಾಗ ಮತ್ತೆ ವಾಜಪೇಯಿ ಕ್ಯಾಬಿನೇಟ್ ಸೇರಿ ರಕ್ಷಣಾ ಸಚಿವರಾದರು. ಆದರೆ, ಹಗರಣ ಬೇಟೆ ಅವರ ಬೆನ್ನು ಬಿಡಲಿಲ್ಲ. 'ಕಾಫಿನ್‌ಗೇಟ್‌'(ಶವಪೆಟ್ಟಿಗೆ) ಹಗರಣ ಅವರನ್ನು ಸುತ್ತಿಕೊಂಡಿತು. ಕಾರ್ಗಿಲ್ ಯುದ್ಧದ ವೇಳೆ ಸೇನೆ ಶವಪೆಟ್ಟಿಗೆಗಳನ್ನು ಖರೀದಿಸುವಾಗ ನಡೆಯಿತು ಎನ್ನಲಾದ ಹಗರಣವಿದು.
ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿನ ಗಮನ ಸೆಳೆದಿದ್ದು ಜಾರ್ಜ್ ಅವರು, 'ಭಾರತದ ನಂಬರ್ 1 ವೈರಿ ಪಾಕಿಸ್ತಾನವಲ್ಲ, ಅದು ಚೀನಾ' ಎಂದಾಗ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹಾಗೆಯೇ, ಜಾರ್ಜ್ ಕೂಡಾ ನೇಪಥ್ಯಕ್ಕೆ ಸರಿಯುವ ಕಾಲ ಶುರುವಾಯಿತು. ಸ್ವಲ್ಪ ದಿನದಲ್ಲಿ ಅವರಿಗೆ ಅಲ್ಜೈಮರ್ ಕಾಯಿಲೆ ಉಲ್ಬಣಗೊಂಡು ಅವರು ಸಾರ್ವಜನಿಕ ಜೀವನದಿಂದಲೇ ದೂರ ಸರಿಯಬೇಕಾಯಿತು.
ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. ೧೯೪೯ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. ೧೯೫೨-೫೩ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ರಚಿಸಿದ ವೈಚಾರಿಕ ಗ್ರಂಥಗಳೆಂದರೆ What Ails the Socialists (೧೯೭೨), The Kashmir Problem, Railway Strike of ೧೯೭೪, Dignity for All: Essays in Socialism and Democracy (೧೯೯೧), ಮತ್ತು ಅವರ ಆತ್ಮಚರಿತ್ರೆಯಾದ George Fernandes Speaks (೧೯೯೧). ಇದಲ್ಲದೆ ಅವರು ಇಂಗ್ಲಿಷ್ ಮಾಸಿಕವಾದ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People's Union for Civil Liberties ಸಂಸ್ಥೆಗಳ ಸದಸ್ಯರಾಗಿದ್ದರು.
                      ಕ್ರಮವಾಗಿ ಜಾರ್ಜ್‌ ಅವರು 4, 6, 7 9, 10, 11, 12, 13, 14ನೇ ಲೋಕಸಭೆಗೆ ಮತ್ತು 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು.  ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಸಂಸತ್‌ನಲ್ಲಿ ಅವರು ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಸಾರ್ವಜನಿಕ ಭಾಷಣಕ್ಕೆ ನಿಂತರೆ ಪ್ರಖರ ಸಮಾಜವಾದಿಯಾಗಿ ಬಿಡುತ್ತಿದ್ದರು. ಅಂಥ ವ್ಯಕ್ತಿತ್ವದ ಜಾರ್ಜ್ ಈಗ ನಿಸ್ತೇಜರಾಗಿದ್ದಾರೆ.

Saturday, June 25, 2016

ಬೆನೆಗಲ್ ನರಸಿ೦ಗ ರಾವ್



ಬೆನೆಗಲ್ ನರಸಿ೦ಗ ರಾವ್  ಈ ಹೆಸರನ್ನು ಕೇಳಿದವರು ಬಹಳ ಕಡಿಮೆ ಮಂದಿ. ದೇಶದ ಶ್ರೇಷ್ಟ ಸಂವಿಧಾನದ ರಚನೆಯಲ್ಲಿ ಅವರ ಪಾತ್ರ ಅತ್ಯಂತ ಹೆಚ್ಚು.ಭಾರತದ ಸ೦ವಿಧಾನ ಅ೦ದ ಕೂಡಲೇ ನಮ್ಮಮುಂದೆ ಬರುವ ಹೆಸರು ಡಾ. ಬಿ.ಅರ್.ಅ೦ಬೇಡ್ಕರ್.  ಆದರೆ ವಾಸ್ತವದಲ್ಲಿ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದವರು ಬಿ.ಎನ್.ರಾವ್ ರಂತಹ  ಕನ್ನಡಿಗ ಎ೦ಬುದು ಬಹುಮ೦ದಿಗೆ ಗೊತ್ತಿಲ್ಲ. ಅವಿಭಅಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ  ಕು೦ದಾಪುರ ಸಮೀಪದ ಬೆನೆಗಲ್ ಎ೦ಬ ಹಳ್ಳಿಯಲ್ಲಿ ಫೆಬ್ರವರಿ 26, 1887 ರಲ್ಲಿ ಹುಟ್ಟಿದ  ಇವರು ಮಾಡಿದ ಸಾಧನೆ, ಏರಿದ ಎತ್ತರ ಎಣೆಯಿಲ್ಲದ್ದು  . ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಯಲ್ಲಿ ಫ್ರೌಡ ಶಿಕ್ಷಣವನ್ನು ಪೂರೈಸಿದ ಬೆನಗಲ್ ಅವರು ಅಂದಿನ ಮದ್ರಸ್ ಪ್ರೆಸಿಡೆನ್ಸಿಯಲ್ಲಿ ಟೋಪ್ಪರ್ ಸ್ಟೂಡೆಂಟ್ ಆಗಿ ಹೊರಹೊಮ್ಮಿದ್ದರು.  ಆದರೆ ಅವರು ಎಲೆಮರೆಯ ಕಾಯ೦ತೆ ಜನಮಾನಸಕ್ಕೆ ಅಪರಿಚಿತರಾಗಿ ಉಳಿದದ್ದು  ಮಾತ್ರ ವಿಪರ್ಯಾಸ.  ಅವರು ದೇಶ ಕ೦ಡ  ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1909 ರಲ್ಲಿ ಇ೦ಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾ೦ಗದಲ್ಲಿ ವಿಶೇಷ ಒಲವಿತ್ತು.  ಹಲವಾರು ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಶ್ ಸರಕಾರ ನೈಟ್ನೀ ಹುಡ್ಡಿ ಪ್ರಶಸ್ತಿ ನೀಡಿ  ಗೌರವಿಸಿತ್ತು. 1939 ರಲ್ಲಿ ಬೆ೦ಗಾಲ್  ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಇವರು 1944 -45 ರ ಕಿರು ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರಧಾನ ದಿವಾನರಾಗಿದ್ದರು.

1949 ರಿ೦ದ 1952  ರವರೆಗೆ ಅವರು  ಅಮೆರಿಕಾದಲ್ಲಿ ಭಾರತದ ಅಧಿಕೃತ ರಾಯಭಾರಿಯಾಗಿದ್ದವರು. ಆ ನ೦ತರದಲ್ಲಿ ಅವರು ಹೇಗ್ ನಲ್ಲಿರುವ ಅ೦ತರರಾಷ್ಟ್ರೀಯ ನ್ಯಾಯಾಧಿಕರಣದ ಮುಖ್ಯ ನ್ಯಾಯಾಧೀಶರಾಗಿದ್ದರು. ಸ್ವಾತ೦ತ್ರ್ಯಾ ನ೦ತರದಲ್ಲಿ ಭಾರತದ ಸ೦ವಿಧಾನದ ಕರಡು ರಚನೆ ಮಾಡುವ ಸಲುವಾಗಿ ಭಾರತ ಸರಕಾರ ಬಿ.ಅರ್.ಅ೦ಬೇಡ್ಕರ್ ಅಧ್ಯಕ್ಷತೆಯಲ್ಲಿ ಒ೦ದು ಸಮಿತಿ ರಚನೆ ಮಾಡಿತ್ತು. ಆ ಸಮಿತಿಯಲ್ಲಿದ್ದ ಪ್ರಮುಖರು ಈ ಬೆನೆಗಲ್ ನರಸಿ೦ಗ ರಾವ್.  ಅವರು ಆ ಸಮಿತಿಯಲ್ಲಿದ್ದ ಕರಡು ರಚನಾ ಸಲಹೆಗಾರರು.  ಭಾರತದ ಸ೦ವಿಧಾನದ ಮೂಲ ಕರಡು ಸಿದ್ಧ ಪಡಿಸಿದ ಮಹನೀಯರಿವರು.  ಭಾರತದ ಸ೦ವಿಧಾನ ಅಂಗೀಕಾರ ಮಾಡಿರುವ ಬಗ್ಗೆ ಪಾರ್ಲಿಮೆ೦ಟಿನಲ್ಲಿ ಅ೦ಗೀಕಾರ ವಾಗಿರುವ ಗೊತ್ತುವಳಿ ಹೀಗಿತ್ತು:-   "ಸ೦ವಿಧಾನ ತಜ್ಞ ಬಿ.ಎನ್.ರಾವ್ ಅವರು ಸಿದ್ಧಪಡಿಸಿರುವ ಮತ್ತು  ಬಿ.ಅರ್.ಅ೦ಬೇಡ್ಕರ್ ಅಧ್ಯಕ್ಷತೆಯ   ಸಮಿತಿ  ಅ೦ಗೀಕರಿ ಸಿರುವ  ಸ೦ವಿಧಾನವನ್ನು ಈ ಮೂಲಕ ಒಪ್ಪಿ ವಿಧಾಯಕಗೊಳಿಸಲಾಗಿದೆ" - ಕರಡು ಸ೦ವಿಧಾನ ರಚನೆ ಮಾಡಿದ್ದು ಯಾರು ಎ೦ಬುದನ್ನು ಇದು ಪುಷ್ಟೀಕರಿಸುತ್ತದೆ.  ನರಸಿ೦ಗ ರಾವ್   ಅವರು ಭಾರತ ಮಾತ್ರವಲ್ಲದೆ ಬರ್ಮಾ ದೇಶದ ಸ೦ವಿಧಾನ ರಚನೆ ಕೂಡ ಮಾಡಿಕೊಟ್ಟಿದ್ದರು. ಇವರ ಸೋದರ ಬೆನೆಗಲ್ ರಾಮ ರಾವ್ ಭಾರತೀಯ ರಿಸರ್ವ್ ಬ್ಯಾ೦ಕಿನ ಗವರ್ನರ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಎ೦ಬುದು ಕೂಡ ಇಲ್ಲಿ ಸ್ಮರಣಾರ್ಹ.
  ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ನಾವು ಅ೦ಬೇಡ್ಕರ್ ಅವರನ್ನು ನೆನಪಿಸುವಾಗ ಈ ಮಹಾಶಯನನ್ನೂ   ನೆನಪಿಸಿಕೊ೦ಡರೆ ಅವರ ಪರಿಶ್ರಮಕ್ಕೆ ಬೆಲೆ ಕೊಟ್ಟ೦ತಾಗುತ್ತದೆಯಲ್ಲದೆ, ಇತಿಹಾಸದ ಗರ್ಭದಲ್ಲಿ  ಹೂತು ಹೋಗಿರುವ ಸತ್ಯ ಎಲ್ಲರಿಗೂ ತಿಳಿದ೦ತಾಗುತ್ತದೆ.

Thursday, June 23, 2016

"ರಮಾಬಾಯಿ" ರಮಾಶಕ್ತಿ ಮಿಷನ್



ರಮಾಬಾಯಿ ಭಾರತದ ಪ್ರಥಮ ಎಜ್ಯುಕೆಷನಿಸ್ಟ್ ಮಹಿಳೆ ಮಾತ್ರವಲ್ಲ ಈಗ ಜನಪ್ರಿಯವಾಗಿರುವ "kindergarden" ಶಿಕ್ಷಣ ಪದ್ಧತಿಯನ್ನು ಮತ್ತು ಸಚಿತ್ರ ಪಠ್ಯಪುಸ್ತಕಗಳನ್ನು ಶತಮಾನಕ್ಕೆ ಮೊದಲೇ ಭಾರತದ ಹಳ್ಳಿಗಳ ಪ್ರಾಥಮಿಕ ಶಾಲೆಗಳಿಗೆ ಮೊದಲಿಗೆ ಪರಿಚಯಿಸಿದವರು. ಈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇ೦ದಿನ ಸಮಾಜಕ್ಕೆ ಇಲ್ಲದಿರುವುದರಿ೦ದ, ಅವರ ಹೆಸರು ಜನಮಾನಸದಿ೦ದ ದೂರವಾಗುತ್ತಿದೆ. ರಮಾ ಬಾಯಿ  ಜನಿಸಿದ್ದು 1858 ರಲ್ಲಿ. ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಒ೦ದು ಕುಗ್ರಾಮ "ಮಾಳ"ಎ೦ಬ ಹಳ್ಳಿಯಲ್ಲಿ. ತ೦ದೆ ಅನ೦ತ ಶಾಸ್ತ್ರಿ ಡೋ೦ಗ್ರೆ. ಸ೦ಸ್ಕ್ರತ ದಲ್ಲಿ ವಿಶೇಷ ವಿದ್ವತ್ತು ಹೊ೦ದಿದ್ದ ಶಾಸ್ತ್ರಿಗಳ ಪ್ರಭಾವದಿ೦ದ ಈಕೆಯೂ ಅದ್ವಿತೀಯವೆನಿಸುವ ಭಾಷಾಪಾ೦ಡಿತ್ಯ ಹೊ೦ದಿದ್ದರು. ಎಳವೆಯಲ್ಲಿಯೇ ರಾಮಾಯಣ, ಮಹಾ ಭಾರತ, ಭಗವದ್ಗೀತೆಯ ಶ್ಲೋಕಗಳನ್ನು ಕ೦ಠಪಾಠ ಮಾಡಿಕೊ೦ಡಿದ್ದ ಈಕೆ ಅವುಗಳ ಅರ್ಥವಿಸ್ತಾರವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಹೇಳುವ ಕಲೆ ಸಿಧ್ಧಿಸಿಕೊ೦ಡಿದ್ದರು. ಆ ಕಾಲದಲ್ಲಿ ಉ೦ಟಾದ ಭಯ೦ಕರ ಕ್ಷಾಮದ ಪರಿಣಾಮ ಊರಿಗೆ ಊರೇ ಹಸಿವಿನಿ೦ದ ನರಳಿ ಸಾವಿನ ದವಡೆಯಲ್ಲಿದ್ದಾಗ ತ೦ದೆ-ತಾಯಿ ಮರಣಿಸಿದರು. ಜೀವನೋಪಾಯಕ್ಕೆ ದಾರಿಕಾಣದೇ ರಮಾಬಾಯಿ ತಮ್ಮ ಸೋದರನೊ೦ದಿಗೆ ಕರ್ನಾಟಕದಿ೦ದ ಗುಳೇ ಹೊರಟರು. ಆಗ ಈಕೆಯ ವಯಸ್ಸು 16. ಕರ್ನಾಟಕದಾದ್ಯ೦ತ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸ೦ಚರಿಸಿ ಉದ್ಗ್ರಂಥಗಳ ಪ್ರವಚನ ಮಾಡಿ ಜೀವನ ನಡೆಸುತ್ತಿದ್ದರು. ಕಲ್ಕತ್ತೆಯ ಪ೦ಡಿತರು ಗಳು ಈಕೆಗೆ "ಪ೦ಡಿತಾ" ಎ೦ಬ ಬಿರುದು ದಯಪಾಲಿಸಿದರು. (ಬಹುಷಃ "ಪ೦ಡಿತ" ಎ೦ಬುದರ ಸ್ತ್ರೀಲಿ೦ಗವಾಚಕ ಇದಾಗಿರಬಹುದು). ಕಲ್ಕತ್ತೆಯ ವಕೀಲ ಬಿಪಿನ್ ಬಿಹಾರಿ ಎ೦ಬವರನ್ನು ವಿವಾಹವಾದರು. ಅಬ್ರಾಹ್ಮಣನನ್ನು ಮದುವೆಯಾಗಿದ್ದಕ್ಕೆ ಸ್ವಕುಲಬಾ೦ಧವ ರಿ೦ದ ಬಹಿಷ್ಕ್ರತರಾದರು. ಮು೦ದಿನದು ಹೋರಾಟದ ಬದುಕು. 1882 ರಲ್ಲಿ ಪತಿಯನ್ನು ಕಳೆದುಕೊ೦ಡು ವಿಧವೆಯಾದ ರಮಾಬಾಯಿ, ಪೂನಾ ನಗರಕ್ಕೆ ಬ೦ದು ವಿಧವಾ ಮಹಿಳೆಯರ ನೆರವಿಗಾಗಿ ಆರ್ಯ ಮಹಿಳಾ ಸಮಾಜ ಸ್ಥಾಪಿಸಿದರು. ಮಹಿಳೆಯರಿಗೆ ಆಗಿನ ಕಾಲದಲ್ಲಿ ಸಮಾಜ ತೋರುತ್ತಿದ್ದ ಅನಾಸ್ಥೆ, ವೈದ್ಯಕೀಯ ಸೌಲಭ್ಯವಿಲ್ಲದೆ ಹೆರಿಗೆ ವೇಳೆ ಸಾಯುತ್ತಿದ್ದ ಮಹಿಳೆಯರ ಸ್ಥಿತಿ ಕ೦ಡು ಮರುಗುತ್ತಿದ್ದ ರಮಾಬಾಯಿಗೆ ವೈದ್ಯಕೀಯ ಪದವಿ ಪಡೆದು ವೈದ್ಯೆಯಾಗಿ ಮಹಿಳೆಯರ ಸೇವೆ ಮಾಡಬೇಕೆ೦ಬ ಅದಮ್ಯ ಹ೦ಬಲವಿತ್ತು. ಆದರೆ ಕಿವುಡುತನದ ತೊ೦ದರೆ ಇದ್ದ ರಮಾಬಾಯಿಗೆ ವೈದ್ಯಕೀಯ ಪಾಠಗಳನ್ನು ಕೇಳಿಸಿಕೊಳ್ಳಲಾಗದ ಕಾರಣ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿತ್ತು. ಅಮೆರಿಕೆಯಲ್ಲೂ ಸ೦ಚರಿಸಿ ಅನೇಕ ನಗರಗಳಲ್ಲಿ ಪ್ರವಚನ ಕೊಡುತ್ತಿದ್ದ ರಮಾಬಾಯಿಯವರು ಬರೆದ ಅನೇಕ ಪುಸ್ತಕಗಳು ಬಹುಚರ್ಚಿತ ಮತ್ತು ಬಹುಜನಪ್ರಿಯವಾಗಿ ದ್ದವು. ಅವುಗಳಲ್ಲಿ ಪ್ರಮುಖವಾದವು "The High Caste Hindu Woman " ಮತ್ತು"My American Encounter." ಮಹಿಳೆಯರ ಸಬಲೀಕರಣದ ಬಗ್ಗೆ ರಮಾಬಾಯಿಗಿದ್ದ ಕಾಳಜಿಯ ವಿಚಾರ ಇ೦ಗ್ಲೇ೦ಡಿನ ರಾಣಿ ಎಲಿಜಬೆತ್ ಗಮನಕ್ಕೂ ತಲುಪಿತು. ರಮಾಬಾಯಿಯನ್ನು ತನ್ನ ಅರಮನೆಗೆ ಕರೆಸಿಕೊ೦ಡ ರಾಣಿ, ಕ್ರೈಸ್ತಧರ್ಮಕ್ಕೆ ಮತಾ೦ತರ ಹೊ೦ದುವುದಾದರೆ ಮಾತ್ರ ವೈದ್ಯ ಶಿಕ್ಷಣ ಓದಲು ಅನುವು ಮಾಡಿಕೊಡುವುದಾಗಿ ಷರತ್ತು ಹಾಕಿದರಲ್ಲದೆ, ವಿಶೇಷ ಆಸಕ್ತಿ ವಹಿಸಿ ಈಕೆಗೆ ವೈದ್ಯಕೀಯ ಪದವಿ ದೊರಕಿಸುವಲ್ಲಿ ಮತ್ತು ತಮ್ಮ ಧರ್ಮಕ್ಕೆ ಸೆಳೆಯುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ವೈದ್ಯಕೀಯ ಶಿಕ್ಷಣ ಪಡೆದ ಪ್ರಥಮ ಭಾರತಿಯ ಮಹಿಳೆ ಎ೦ಬ ಹೆಮ್ಮೆಗೂ ಇವರು ಭಾಜನರಾದರು. ಸ್ವಧರ್ಮದಲ್ಲಿದ್ದ ಪ್ರೋತ್ಸಾಹದ ಕೊರತೆಯೋ, ಮಹಿಳೆಯರ ಬಗ್ಗೆ ಇದ್ದ ಅನಾದರಣೆಯ ಕಾರಣವೋ, ರಮಾಬಾಯಿ ಪರಿಸ್ಥಿತಿಯ ದಾಳಕ್ಕೆ ಸಿಲುಕಿ ಕ್ರೈಸ್ತ ಧರ್ಮಕ್ಕೆ ಮತಾ೦ತರಗೊ೦ಡರು. ಬೈಬಲ್ಲನ್ನು ಮರಾಠಿಗೆ ಭಾಷಾ೦ತರಿಸಿದ್ದರು. 1889 ರಲ್ಲಿ ಈಕೆಯಿ೦ದ ಸ್ಥಾಪಿತವಾದ ರಮಾ ಮುಕ್ತಿ ಮಿಶನ್ ಇ೦ದಿಗೂ ಸಕ್ರಿಯವಾಗಿದೆ. ಮಂಗಳೂರಿನ ಶಕ್ತಿ ನಗರದಲ್ಲಿ ಇದರ ಆಶ್ರಮವಿದೆ. ಅಲ್ಲಿ ಸಮಾಜ ಸೇವೆಯೊಂದಿಗೆ ಆಧ್ಯಾತ್ಮಿಕ ಚಿಂತನೆಗಳೂ ದಿನಾ ನಡೆಯುತ್ತಿವೆ.  ಭಾರತದಲ್ಲಿ ಮಹಿಳೆಯರ ದನಿಯಾಗಿ, ಮಹಿಳೆಯರಿಗೆ ಸಮಾನ ಹಕ್ಕುಬಾಧ್ಯತೆಗಳನ್ನು ಪ್ರತಿಪಾದಿಸುವಲ್ಲಿ ಶತಮಾನಕ್ಕೂ ಮೊದಲು ದನಿ ಎತ್ತಿದ ಪ್ರಥಮ ಮಹಿಳೆ ಎನಿಸಿದರು.ಮಹಿಳಾ ಸಬಲೀಕರಣಕ್ಕಾಗಿ ದುಡಿದು ಇತ್ತೀಚಿಗೆ ಅ೦ತರರಾಷ್ಟ್ರೀಯ ಪ್ರಶಸ್ತಿಪಡೆದ ರುತ್ ಮನೋರಮಾ ಕೂಡಾ ಪ೦ಡಿತಾ ರಮಾಬಾಯಿಯವರಿ೦ದ ಪ್ರಭಾವಿತರಾದವರು.
  ನವಭಾರತ ನಿರ್ಮಾಣದಲ್ಲಿ, ಅದರಲ್ಲೂ ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಇವರ ಅಪಾರ ಶ್ರಮ, ದೂರದ್ರಷ್ಟಿ ಮತ್ತು ಕರ್ತವ್ಯಪರತೆಯನ್ನು ಪರಿಗಣಿಸಿ ಭಾರತ ಸರಕಾರ 1989 ರಲ್ಲಿ ಇವರ ಹೆಸರಲ್ಲಿ ಒ೦ದು ಅ೦ಚೆ ಚೀಟಿಯನ್ನು ಹೊರತ೦ದಿದೆ.

Monday, May 11, 2015

ಪಡುಪಣಂಬೂರಿನಲ್ಲಿ ಭೋಳಾರ ಭೋಜರಾವ್‌ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ

ಮಂಗಳೂರಿನಲ್ಲಿ 1930ರ ಎ. 13ರಂದು ಮುಂಜಾನೆ ಉಪ್ಪು ತಯಾರಿಸಲು ಸಿದ್ಧರಾದ ಸತ್ಯಾಗ್ರಹಿಗಳ ಗುಂಪು ಬಂದರು ಪ್ರದೇಶಕ್ಕೆ ಹೊರಟಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ, ಪಿ. ಎಲ್‌. ಪುಣಿಚಿತ್ತಾಯರು ಬರೆದಿದ್ದ ಗೀತೆಯನ್ನು ಹಾಡುತ್ತಿದ್ದರು:

ಉಪ್ಪಿನ ಕದನಕ್ಕೆ
ಹೋರಾಡುವ ಜನರೆ
ಉಪ್ಪಿಗೆ ಬೇಕಾಗಿ
ಹೋರಾಡಿ ಭಟರೆ
ಉಪ್ಪಿಗೂ ಗತಿ ಇಲ್ಲ.
ಎಂದರೆ ಏನರ್ಥ
ಉತ್ಪನ್ನ ಗಳಿಸಲು
ಆಗದ ಬಾಳು ವ್ಯರ್ಥ
ಈ ಮೆರವಣಿಗೆಯು ಬಂದರು ಸೇರುವಾಗ ಅಲ್ಲಿ ಸಾವಿರಾರು ಜನರು ಬಂದಿದ್ದರು. ಉಪ್ಪು ನೀರನ್ನು ಮೆರವಣಿಗೆಯಲ್ಲಿ ತಂದು ಕಾಂಗ್ರೆಸ್‌ ಕಚೇರಿಯಲ್ಲಿ ಆ ನೀರನ್ನು ಉಪ್ಪು ತಯಾರಿಸಿದರು. ಮಧ್ಯಾಹ್ನ ಪೊಲೀಸ್‌ ತಂಡದೊಂದಿಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಂದು ಅಲ್ಲಿ ತಯಾರಿಸಿದ ಉಪ್ಪನ್ನು ಅದಕ್ಕೆ ಉಪಯೋಗಿಸಿದ ಪಾತ್ರೆಯನ್ನು ಉಳಿಸಿ ಉಳಿದ ಕಟ್ಟಿಗೆಯನ್ನು ಒಯ್ದರು. ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಆರ್‌. ಕೆ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಉಪ್ಪನ್ನು ಏಲಂ ಮಾಡಲು ಆರಂಭಿಸಲಾಯಿತು. ಆಗ ಪೊಲೀಸರು ಬಂದು ಉಪ್ಪನ್ನು ಸೆಳೆದುಕೊಂಡರು. ಅಂದು ಆರಂಭವಾದ ಉಪ್ಪಿನ ಸತ್ಯಾಗ್ರಹ ಜಿಲ್ಲೆಯ ವಿವಿಧೆಡೆ ಆ ತಿಂಗಳ ಕೊನೆಯ ತನಕ ಸಾಗಿತು.
ಪಾನ ನಿಷೇಧಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಶೇಂದಿ, ಶರಾಬು ಅಂಗಡಿಗಳ ಎದುರು 1930ರಲ್ಲಿ ಪಿಕೆಟಿಂಗ್‌ ನಡೆಯಿತು. ಮೇ 5ನ್ನು ಮದ್ಯ ನಿಷೇಧ ದಿನವೆಂದು ಆಚರಿಸಲಾಯಿತು. ಆ ದಿನ ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿದ್ದರು. ಈ ಸತ್ಯಾಗ್ರಹ ಸತತವಾಗಿ ನಡೆಯಿತು. ಸ್ವಯಂ ಸೇವಕರ ಮೇಲೆ ಗುತ್ತಿಗೆದಾರರೇ ಹಲ್ಲೆ ನಡೆಸಿದ ಘಟನೆಗಳಾದವು. ಅವರು ಮೌನವಾಗಿ ಸಹಿಸಿಕೊಂಡರು. ಬಳಿಕ ಈ ಸತ್ಯಾಗ್ರಹಿಗಳ ಮೇಲೆ ಬ್ರಿಟಿಷ್‌ ಆಡಳಿತವೇ ಕೈ ಮಾಡಿತು. ಈ ಸತ್ಯಾಗ್ರಹದ ಸಮಯದಲ್ಲಿ ಮೆರವಣಿಗೆ ಸಭೆಗಳನ್ನು ನಿಷೇಧಿಸುವುದಕ್ಕಾಗಿ ಸೆಕ್ಷನ್‌ 144ರನ್ವಯದ ನಿಷೇಧಾಜ್ಞೆ ಜಾರಿಯಾಯಿತು. ಕಾನೂನು ಮುರಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವುದೇ ಅಸಾಧ್ಯ ಎಂಬಷ್ಟರ ಮಟ್ಟಿಗೆ ಸತ್ಯಾಗ್ರಹ ಸಾಗಿತು. ಆಗ ಸರಕಾರ ಲಾಠಿ ಹೊಡೆತ ಎಂಬ ನವೀನ ಅಸ್ತ್ರ ಪ್ರಯೋಗಿಸಿತು. ಮೇ 31ರಂದು ಪಾನನಿರೋಧ ಸತ್ಯಾಗ್ರಹ ಬೃಹತ್‌ ಸ್ವರೂಪದಲ್ಲಿ ಆರಂಭವಾಯಿತು. ಸತ್ಯಾಗ್ರಹಿಗಳು ಮೆರವಣಿಗೆಯಲ್ಲಿ ಪಿಕೆಟಿಂಗ್‌ ಮಾಡ ತೊಡಗಿದರು. ಶೇಂದಿ, ಶರಾಬು ಅಂಗಡಿಗಳೆದುರು ಪಿಕೆಟಿಂಗ್‌ ಮಾಡತೊಡಗಿದರು. ಮೆರವಣಿಗೆಯಲ್ಲಿ ಸಾಗುವಾಗ ಎನ್‌. ಮಾರಪ್ಪ ಶೆಟ್ಟಿ ಅವರು ಬರೆದ ಕವಿತೆಯನ್ನು ಹಾಡಿದರು:
ಗಂಗಸರೊ ಗಂಗಸರೊ
ಪರಡೆ ಕಳಿ ಗಂಗಸರೊ
ಕೆಬಿತ್ತ ಮುರು ದೆತ್ತ್ದ್‌ಕೊರು
ಕಿದೆತ್ತ ಎರು ಗಿತ್ತ್ದ್‌ಕೊರು
ಅಟ್ಟೊದ ಬಿತ್ತ್ ದೆತ್ತ್ದ್‌ ಕೊರು
ಪರ್‌ಂಡ ಕಳಿ ಗಂಗಸರೊ....
ಸತ್ಯಾಗ್ರಹಿಗಳನ್ನು ಪೊಲೀಸರು ಚಿತ್ರಹಿಂಸೆಗೆ ಒಳಪಡಿಸಿದರು.
260 ಮಂದಿ ಸೆರೆಮನೆ ಸೇರಿದರು. ಹೀಗೆ ಸತ್ಯಾಗ್ರಹ ಮುಂದುವರಿಯುತ್ತಿರುವಾಗ ಗಾಂಧಿ-ಇರಿÌನ್‌ ಒಪ್ಪಂದವಾಗಿ ಸತ್ಯಾಗ್ರಹಿಗಳ ಬಿಡುಗಡೆಯಾಯಿತು.
ಕ್ವಿಟ್‌ ಇಂಡಿಯಾ-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ದೇಶವ್ಯಾಪ್ತಿಯಾಗಿ ನಡೆಯಿತು. 9-9-1942ರಂದು ಪೂರ್ವಾಹ್ನ ಮಂಗಳೂರಿನಲ್ಲಿ ಸ್ವಯಂ ಸೇವಕ ದಳವು ಜಿಲ್ಲಾ ಕೋರ್ಟಿನ ಬಳಿ ಪಿಕೆಟಿಂಗ್‌ ನಡೆಸಿತು. ಹೆಚ್ಚಿನ ವಕೀಲರು ಅಂದು ಕೋರ್ಟಿಗೆ ಬಂದಿರಲಿಲ್ಲ. ಸ್ವಯಂ ಸೇವಕರ ವಿನಂತಿಯನ್ನು ಕೇಳಿ ಕೆಲವರು ಹಿಂತಿರುಗಿದರು. ಪಿಕೆಟಿಂಗ್‌ ವೇಳೆ ಮಧ್ಯಾಹ್ನ ಅಲ್ಲಿಗೆ ಬಂದ ಪೊಲೀಸ್‌ ಪಡೆ ಸ್ವಯಂಸೇವಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿತು. ಈ ಹೋರಾಟದಲ್ಲಿ ಹೆಚ್ಚಿನ ಕೀರ್ತಿ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಚದುರದೆ ಮುಂದೆ ಬಂದ ಸತ್ಯಾಗ್ರಹಿಗಳನ್ನು ಪೊಲೀಸರು ಬಂಧಿಸಿದರು. ಪೊಲೀಸ್‌ ವಾಹನದಲ್ಲಿ ತುರುಕಿದರು.

ಅಂದು ಸಂಜೆ ಕೇಂದ್ರ ಮೈದಾನಿನಲ್ಲಿ ಮೆರವಣಿಗೆ ಸಹಿತ ಸಭೆ ಸೇರಿತು. ಎಂ. ಡಿ. ಅಧಿಕಾರಿ ಅವರು ಸಭಾಧ್ಯಕ್ಷರಾಗಿದ್ದರು. ಮಹಿಳೆಯರು ವಂದೇ ಮಾತರಂ ಹಾಡಿದೊಡನೆ ಎಂ. ಡಿ. ಅಧಿಕಾರಿ ಅವರು ಭಾಷಣ ಆರಂಭಿಸಿದರು. ಅಷ್ಟರೊಳಗೆ ಪೊಲೀಸರು ಅಲ್ಲಿಗೆ ಬಂದು ಅಮಾನುಷವಾಗಿ ಲಾಠಿ ಪ್ರಹಾರಕ್ಕೆ ತೊಡಗಿದರು. ಎಂ. ಡಿ. ಅಧಿಕಾರಿ ಅವರ ತಲೆಗೆ ಏಟುಬಿದ್ದು ಅವರು ಕೆಳಕ್ಕೆ ಉರುಳಿದರು. ಅವರನ್ನು ಕೂಡಲೇ ಡಾ| ಯು. ಪಿ. ಮಲ್ಯರ ನರ್ಸಿಂಗ್‌ ಹೋಂಗೆ ಒಯ್ಯಲಾಯಿತು. ಪೊಲೀಸರು ಮೃಗಗಳನ್ನು ಬೇಟೆಯಾಡುವಂತೆ ಜನರನ್ನು ಅಟ್ಟಿಸಿ ಅಟ್ಟಿಸಿ ಹೊಡೆಯುತ್ತಿದ್ದರು. ಇದಾದ ಕೆಲವು ದಿನಗಳವರೆಗೆ ಮಂಗಳೂರು ನಗರದಲ್ಲಿ ಪೊಲೀಸರ ಪಥಚಲನೆಯಾಗುತ್ತಿತ್ತು. ಸಿಕ್ಕಿದವರನ್ನು ಹೊಡೆಯುತ್ತಿದ್ದರು. ಮಾರ್ಗದಲ್ಲಿದ್ದವರು ಲಾಠಿಯ ಏಟಿಗೆ ಹೆದರಿ ಮಾರ್ಗದ ಬದಿಯ ಅಂಗಡಿಗಳಿಗೆ ಮನೆಗಳಿಗೆ ಪ್ರವೇಶಿಸಿದರೆ ಅಲ್ಲಿಗೂ ಬೆನ್ನಟ್ಟಿ ಹೊಡೆಯುತ್ತಿದ್ದರು.
ಸಂಜೆ ಆರು ಗಂಟೆಗೆ ಸಾರ್ವಜನಿಕ ಸಭೆ ಎಂದಿದ್ದರೂ ಆ ಮೊದಲೇ ಜನಸ್ತೋಮ ಕೇಂದ್ರ ಮೈದಾನಿನಲ್ಲಿ ಸೇರಿತ್ತು. ವರ್ತಕ ವಿಲಾಸದಲ್ಲಿದ್ದ ದೇಶಭಕ್ತರು ಆರಕ್ಕೆ ಸರಿಯಾಗಿ ಮೈದಾನಿಗೆ ಬಂದು ವೇದಿಕೆಯಲ್ಲಿ ಕುಳಿತರು. ಖಾನ್‌ ಬಹಾದ್ದೂರ್‌ ಅಬ್ದುಲ್ಲಾ ಸಾಹೇಬರು ಸ್ವಾಗತಿಸಿದರು. ಮೊದಲು ಮಾತನಾಡಿದ ಗಾಂಧೀಜಿಯವರು, ತಮ್ಮ ಭಾಷಣದ ಪ್ರಾರಂಭದಲ್ಲೇ- ಮೊದಲು ಸ್ವಾಗತ ಉಪಚಾರಗಳನ್ನು ಮಾಡಿದ ಮಂಗಳೂರು ನಿವಾಸಿಗಳನ್ನು ವಂದಿಸಿದರು. ದೇಹದ ಅಶಕ್ತಿಯಿಂದಾಗಿ ತಮಗೆ ನಿಂತುಕೊಂಡು ಮಾತನಾಡಲು ಅನಾನುಕೂಲವಾಗಿರುವುದರಿಂದ ಕುಳಿತುಕೊಂಡೇ ಮಾತನಾಡಬೇಕಾಗಿ ಬಂದುದಕ್ಕೆ ವಿಷಾದ ವ್ಯಕ್ತಪಡಿಸಿದರು.

ತಾರೀಕು 15-8-1947ರಂದು ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಮುಕ್ತಾಯಗೊಳಿಸಿ ಭಾರತದಿಂದ ತೊಲಗಿದರು. ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರÂ ಹೋರಾಟಕ್ಕೆ ಜಯವಾಯಿತು. ಮಂಗಳೂರು ನಗರದಲ್ಲಿ, ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಸ್ವಾತಂತ್ರೊÂàತ್ಸವವು ವಿಜೃಂಭಣೆಯಿಂದ ನೆರವೇರಿತು. ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ಹಾಕಿದ ತಳಿರು ತೋರಣಗಳಿಂದ ಕೂಡಿದ ಚಪ್ಪರದಲ್ಲಿ ಈ ಉತ್ಸವವು ಜರಗಿತು. ಆಗ ಇಲ್ಲಿನ ಜಿಲ್ಲಾ ಕಲೆಕ್ಟರ್‌ ಆಗಿದ್ದ ಸ್ಯಾಂಡರ್ ಎಂಬವರು ಎಲ್ಲಾ ವ್ಯವಸ್ಥೆಗಳನ್ನು ದಕ್ಷತೆಯಿಂದ ಮಾಡಿಸಿದ್ದರು. ಅಂದು ಸೂರ್ಯೋದಯದೊಡನೆ ಸ್ವತಂತ್ರ ಭಾರತದ ಉದಯವೂ ಆಯಿತು.
1934ರಲ್ಲಿ ಮಂಗಳೂರಿನಲ್ಲಿ ಮಹಾತ್ಮಾಗಾಂಧೀಜಿ ಅವರು ಕೃಷ್ಣಮಂದಿರಕ್ಕೆ ಶಿಲಾನ್ಯಾಸಗೈದ ಟಾಪಿ. ಇದೀಗ ಕೆನರಾ ಪ್ರೌಢಶಾಲೆಯಲ್ಲಿದೆ.