ಪೋಸ್ಟ್‌ಗಳು

ಟಿಪ್ಪು ಸುಲ್ತಾನ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಂಟ್ವಾಳದ 'ನೆತ್ತರ ಕೆರೆ' ಮತ್ತು ಟಿಪ್ಪು ಸುಲ್ತಾನನ ರಕ್ತ ಚರಿತೆ...!

ಇಮೇಜ್
 ದಕ್ಷಿಣ ಕನ್ನಡ: ಬ್ರಿಟೀಷರ ವಿರುದ್ದ ಸ್ವಾತಂತ್ರ್ಯದ ರಣಕಹಳೆ ಊದಿದ ಮೈಸೂರಿನ  ಹುಲಿ ಟಿಪ್ಪು ಸುಲ್ತಾನ್‌  ಅನೇಕರಿಗೆ ಅಪ್ರತಿಮ ದೇಶಭಕ್ತನೆಂದು ಕಂಡರೂ  ಅನೇಕರ ಪಾಲಿಗೆ ಆತ ವಿಲನ್  ಆಗಿದ್ದ ಅದರಲ್ಲೂ ಕರಾವಳಿಯ ಕ್ರೈಸ್ತರು ಮತ್ತು ಕೊಡಗಿನ  ಕೊಡವರ ಪಾಲಿಗೆ ಆತ ನರ ಹಂತಕನಾಗಿದ್ದ ಎಂದೂ ಇತಿಹಾಸ ಹೇಳುತ್ತೆ. ಬ್ರಿಟೀಷರ ಪರವಾಗಿ ಇವರು ಕೆಲಸ ಮಾಡುತ್ತಾರೆ ಎಂಬ ಊಹಪೋಹಕ್ಕೆ ಆತ ಕ್ರೈಸ್ತರು ಮತ್ತು ಕೊಡವರ ಮಾರಣ ಹೋಮವನ್ನೇ ಮಾಡಿದ್ದ. ಇದನ್ನು ಪುಷ್ಟಿಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ ಈ ಕೆರೆಗೂ ಟಿಪ್ಪುಸುಲ್ತಾನನ (Tippusultan) ಚರಿತ್ರೆಗೂ ಹತ್ತಿರದ ನಂಟಿದೆ.    ಟಿಪ್ಪು ಸುಲ್ತಾನ್  ಅಬಲೆಯರು, ವೃದ್ದರು, ಸೇರಿ  ಕರಾವಳಿಯ  ಸಾವಿರಾರು ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ  ಕೊಂಡುಹೋಗುವಾಗ  ಸಂದರ್ಭದಲ್ಲಿ  ಸೆರೆಯಿಂದ ತಪ್ಪಿಸಿ ಓಡಲು ಯತ್ನಿಸಿದ್ದವರನ್ಜು, ನಡೆದುಕೊಂಡು ಹೋಗಲು ಅಶಕ್ತರಾದವನ್ನು ಇದೇ ಕೆರೆಯ ಬಳಿ ತಲೆ ಕಡಿದು ಕೊಂದು‌ ಹಾಕಿದ್ದನಂತೆ. ಈ ಘಟನೆಗೆ ಸಂಬಂಧಿಸಿದಂತೆ0 ಟಿಪ್ಪುವಿನ ಜೀವನ ಚರಿತ್ರೆಯಲ್ಲೂ ಉಲ್ಲೇಖಗಳಿವೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆ ಕ್ರೌರ್ಯಕ್ಕೆ ಸಾಕ್ಷಿಯಾದ ಕೆರೆಯಾದ‌ ಕಾರಣ ಈ ಕೆರೆಗೆ ನೆತ್ತರಕೆರೆ ಎನ್ನುವ ಹೆಸರು ಬಂತೆನ್ನಲಾಗಿದೆ.  ಇದೇ ಕಾರಣಕ್ಕೆ ...