ಪೋಸ್ಟ್‌ಗಳು

ಜೂನ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದ ಸಂವಿಧಾನ ರಚನೆಯಲ್ಲಿ ಮಂಗಳೂರಿನ ಧರ್ಮಗುರು..!

ಇಮೇಜ್
 Father Jerome D'Souza, SJ (1897–1977) was an eminent Indian Jesuit priest, educationist, diplomat, and statesman. He is best remembered as one of the key architects of the Indian Constitution, representing the Christian community and the Madras province in the Constituent Assembly of India. ಹಲವು ಜಾತಿ , ಧರ್ಮ, ಬಣ್ಣಗಳ ವೈವಿಧ್ಯಗಳಲ್ಲಿ ಏಕತೆ ಇರುವ ಭಾರತದ ಭದ್ರ ಬುನಾದಿ ಇರುವುದು ಸಂವಿಧಾನದಲ್ಲಿ. ಡಾ. ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಈ ಸಂವಿಧಾನ ರೂಪಿಸುವಲ್ಲಿ ದೇಶದ ಅನೇಕ ಮಹನೀಯರ ಕೊಡೆಗೆ ಅತ್ಯಮೂಲ್ಯವಾದುದು. ಅದರಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಿಂದ ನೇಮಕಗೊಂಡ ಐವರು ಮಹನೀಯರಲ್ಲಿ ಓರ್ವ ಧರ್ಮಗುರುವು ಸೇರಿದ್ದಾರೆ. ಅವರೇ  ವಂದನೀಯ ಫಾದರ್ ಜೆರೋಮ್ ಡಿ ಸೋಜಾ. ಫಾದರ್ ಜೆರೋಮ್ ಡಿ ಸೋಜಾ ಭಾರತದ ಹೆಮ್ಮೆಯ ಶಿಕ್ಷಣ ತಜ್ಞರು, ರಾಜತಾಂತ್ರಿಕರು ಮತ್ತು ಭಾರತ ಸಂವಿಧಾನ ರಚನಾ ಸಭೆಯ (Constituent Assembly) ಪ್ರಮುಖ ಸದಸ್ಯರಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾವಳಿ ಕರ್ನಾಟಕ ಹಾಗೂ ಕ್ರಿಶ್ಚಿಯನ್ ಸಮುದಾಯದಿಂದ ದೇಶದ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಫಾದರ್ ಜೆರೋಮ್ ಡಿಸೋಜಾ ಅವರು 1897ರ ಆಗಸ್ಟ್ 6ರಂದು ಮಂಗಳೂರಿನಲ್ಲಿ ಮುಲ್ಕಿಯ ಚಿತ್ರಾಪುವಿನ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂ...

ಬಂಟ್ವಾಳದ 'ನೆತ್ತರ ಕೆರೆ' ಮತ್ತು ಟಿಪ್ಪು ಸುಲ್ತಾನನ ರಕ್ತ ಚರಿತೆ...!

ಇಮೇಜ್
 ದಕ್ಷಿಣ ಕನ್ನಡ: ಬ್ರಿಟೀಷರ ವಿರುದ್ದ ಸ್ವಾತಂತ್ರ್ಯದ ರಣಕಹಳೆ ಊದಿದ ಮೈಸೂರಿನ  ಹುಲಿ ಟಿಪ್ಪು ಸುಲ್ತಾನ್‌  ಅನೇಕರಿಗೆ ಅಪ್ರತಿಮ ದೇಶಭಕ್ತನೆಂದು ಕಂಡರೂ  ಅನೇಕರ ಪಾಲಿಗೆ ಆತ ವಿಲನ್  ಆಗಿದ್ದ ಅದರಲ್ಲೂ ಕರಾವಳಿಯ ಕ್ರೈಸ್ತರು ಮತ್ತು ಕೊಡಗಿನ  ಕೊಡವರ ಪಾಲಿಗೆ ಆತ ನರ ಹಂತಕನಾಗಿದ್ದ ಎಂದೂ ಇತಿಹಾಸ ಹೇಳುತ್ತೆ. ಬ್ರಿಟೀಷರ ಪರವಾಗಿ ಇವರು ಕೆಲಸ ಮಾಡುತ್ತಾರೆ ಎಂಬ ಊಹಪೋಹಕ್ಕೆ ಆತ ಕ್ರೈಸ್ತರು ಮತ್ತು ಕೊಡವರ ಮಾರಣ ಹೋಮವನ್ನೇ ಮಾಡಿದ್ದ. ಇದನ್ನು ಪುಷ್ಟಿಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನ ಈ ಕೆರೆಗೂ ಟಿಪ್ಪುಸುಲ್ತಾನನ (Tippusultan) ಚರಿತ್ರೆಗೂ ಹತ್ತಿರದ ನಂಟಿದೆ.    ಟಿಪ್ಪು ಸುಲ್ತಾನ್  ಅಬಲೆಯರು, ವೃದ್ದರು, ಸೇರಿ  ಕರಾವಳಿಯ  ಸಾವಿರಾರು ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ  ಕೊಂಡುಹೋಗುವಾಗ  ಸಂದರ್ಭದಲ್ಲಿ  ಸೆರೆಯಿಂದ ತಪ್ಪಿಸಿ ಓಡಲು ಯತ್ನಿಸಿದ್ದವರನ್ಜು, ನಡೆದುಕೊಂಡು ಹೋಗಲು ಅಶಕ್ತರಾದವನ್ನು ಇದೇ ಕೆರೆಯ ಬಳಿ ತಲೆ ಕಡಿದು ಕೊಂದು‌ ಹಾಕಿದ್ದನಂತೆ. ಈ ಘಟನೆಗೆ ಸಂಬಂಧಿಸಿದಂತೆ0 ಟಿಪ್ಪುವಿನ ಜೀವನ ಚರಿತ್ರೆಯಲ್ಲೂ ಉಲ್ಲೇಖಗಳಿವೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆ ಕ್ರೌರ್ಯಕ್ಕೆ ಸಾಕ್ಷಿಯಾದ ಕೆರೆಯಾದ‌ ಕಾರಣ ಈ ಕೆರೆಗೆ ನೆತ್ತರಕೆರೆ ಎನ್ನುವ ಹೆಸರು ಬಂತೆನ್ನಲಾಗಿದೆ.  ಇದೇ ಕಾರಣಕ್ಕೆ ...