ಪೋಸ್ಟ್‌ಗಳು

ಮಂಗಳೂರು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾರತದ ಸಂವಿಧಾನ ರಚನೆಯಲ್ಲಿ ಮಂಗಳೂರಿನ ಧರ್ಮಗುರು..!

ಇಮೇಜ್
 Father Jerome D'Souza, SJ (1897–1977) was an eminent Indian Jesuit priest, educationist, diplomat, and statesman. He is best remembered as one of the key architects of the Indian Constitution, representing the Christian community and the Madras province in the Constituent Assembly of India. ಹಲವು ಜಾತಿ , ಧರ್ಮ, ಬಣ್ಣಗಳ ವೈವಿಧ್ಯಗಳಲ್ಲಿ ಏಕತೆ ಇರುವ ಭಾರತದ ಭದ್ರ ಬುನಾದಿ ಇರುವುದು ಸಂವಿಧಾನದಲ್ಲಿ. ಡಾ. ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಈ ಸಂವಿಧಾನ ರೂಪಿಸುವಲ್ಲಿ ದೇಶದ ಅನೇಕ ಮಹನೀಯರ ಕೊಡೆಗೆ ಅತ್ಯಮೂಲ್ಯವಾದುದು. ಅದರಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಿಂದ ನೇಮಕಗೊಂಡ ಐವರು ಮಹನೀಯರಲ್ಲಿ ಓರ್ವ ಧರ್ಮಗುರುವು ಸೇರಿದ್ದಾರೆ. ಅವರೇ  ವಂದನೀಯ ಫಾದರ್ ಜೆರೋಮ್ ಡಿ ಸೋಜಾ. ಫಾದರ್ ಜೆರೋಮ್ ಡಿ ಸೋಜಾ ಭಾರತದ ಹೆಮ್ಮೆಯ ಶಿಕ್ಷಣ ತಜ್ಞರು, ರಾಜತಾಂತ್ರಿಕರು ಮತ್ತು ಭಾರತ ಸಂವಿಧಾನ ರಚನಾ ಸಭೆಯ (Constituent Assembly) ಪ್ರಮುಖ ಸದಸ್ಯರಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾವಳಿ ಕರ್ನಾಟಕ ಹಾಗೂ ಕ್ರಿಶ್ಚಿಯನ್ ಸಮುದಾಯದಿಂದ ದೇಶದ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು. ಫಾದರ್ ಜೆರೋಮ್ ಡಿಸೋಜಾ ಅವರು 1897ರ ಆಗಸ್ಟ್ 6ರಂದು ಮಂಗಳೂರಿನಲ್ಲಿ ಮುಲ್ಕಿಯ ಚಿತ್ರಾಪುವಿನ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂ...

ಉಡುಪಿ ಅನಂತಪದ್ಮನಾಭ ದೇವಾಲಯದಲ್ಲಿ ಪತ್ತೆಯಾದ ಶಾಸನೋಕ್ತ ಕಲಾತ್ಮಕ ದೀಪ

ಇಮೇಜ್
ಉಡುಪಿ ಜಿಲ್ಲೆ ಉಡುಪಿ ತಾಲೂಕಿನಲ್ಲಿರುವ ಪೆರ್ಡೂರಿನ  ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪರೂಪದ ದೀಪ ಒಂದು ಕಂಡು ಬಂದಿದೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ (ರಿ,), ಉಡುಪಿ ಇದರ ಸ್ಥಾಪಕ ಸದಸ್ಯ ಪ್ರೊ. ಮುರುಗೇಶಿ ಟಿ ಅವರು ಈ  ಶಾಸನೋಕ್ತ ಕಲಾತ್ಮಕ ದೀಪದ ಬಗ್ಗೆ ಅಧ್ಯಾಯನ ಮಾಡಿದ್ದು ಇದರ ಮಾಹಿತಿ ಪ್ರಕಟಿಸಿದ್ದಾರೆ. ದುಂಡನೆಯ ತಳವನ್ನು ಹೊಂದಿರುವ ದೀಪದ ಮೇಲ್ಭಾಗದಲ್ಲಿ ಕಮಾನಿನ ಆಕಾರದ ಅತ್ಯಂತ ಕಲಾತ್ಮಕವಾದ ಫಲಕವಿದೆ. ಈ ಫಲಕದ ಎರಡೂ ಬದಿಗಳಲ್ಲಿ ಶೈವ ಮತ್ತು ವೈಷ್ಣವ ಪಂಥದ ಶಿಲ್ಪಗಳಿದ್ದು, ದೇವಾಲಯದ ಶೈವ ಮತ್ತು ವೈಷ್ಣವ ಪರಂಪರೆಯ ಅಪರೂಪದ ಪ್ರತೀಕವಾಗಿದೆ. ದೀಪದ ಮೊದಲ ಮುಖದ ಮಧ್ಯದಲ್ಲಿ ಕಾಲಪುರುಷನ ಮೇಲೆ ನಿಂತಿರುವ ನಟರಾಜನ ಶಿಲ್ಪವಿದೆ. ಎಡ-ಬಲದಲ್ಲಿ ನಗಾರಿಯನ್ನು ಬಾರಿಸುವ ಗಣಧಾರಿ ಹಾಗೂ ತಾಳವನ್ನು ನುಡಿಸುತ್ತಿರುವ  ಭಂಗಿಯ ಶಿಲ್ಪಗಳಿವೆ.ಭಂಗಿಯ ಬಲಭಾಗದಲ್ಲಿ ಖಡ್ಗರಾವಣ ಮತ್ತು ಕುಮಾರ ಶಿಲ್ಪಗಳಿವೆ. ಖಡ್ಗ ರಾವಣ ಅರೆ ಬೆತ್ತಲೆಯಾಗಿ ವಿಸ್ಮಯಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನನಾಗಿದ್ದಾನೆ. ಕುಮಾರ ಮಯೂರವಾಹನನಾಗಿದ್ದಾನೆ. ನಗಾರಿ ಬಾರಿಸುವ ಗಣಧಾರಿಯ ಎಡಕ್ಕೆ ನಂದಿವಾಹನೆ ಪಾರ್ವತಿ ಮತ್ತು ಮೂಷಕ ವಾಹನ ಗಣಪತಿಯ ಶಿಲ್ಪಗಳಿವೆ. ಈ ಶಿಲ್ಪಗಳು ಅತ್ಯಂತ ಸ್ಪಷ್ಟವಾಗಿ ಶಿವನ ಪ್ರಳಯ ತಾಂ...