Posts

Showing posts with the label Costal Karnataka

'ಕಂಬಳ' ಕೋಣಗಳ ಓಟ ಸ್ಪರ್ಧೆ

Image
'ಕಂಬಳ' ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಪರಶುರಾಮ ಸೃಷ್ಟಿಯೆಂದು ಕರೆಸಿಕೊಳ್ಳುವ ತುಳುನಾಡಿನಲ್ಲಿರುವ ವೈವಿಧ್ಯಮಯ ಆಚರಣೆಗಳಲ್ಲಿ ಜನಪ್ರಿಯತೆಯ ಮಜಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಕಂಬಳ ಸ್ಪರ್ಧೆಗಳು . ಕಂಬಳಗಳಲ್ಲಿ ಹಲವು ರೀತಿಯ ಆಚರಣೆಗಳಿದ್ದು ‘ ಬಾರೆ ಕಂಬಳ ’ ಮತ್ತು ‘ ಪೂಕರೆ ಕಂಬಳ ’ ಗಳಲ್ಲಿ ಕಂಬಳದ ಆಚರಣೆಗಳನ್ನು ಸಾಂಕೇತಿಕವಾಗಿ ಪೂರೈಸಲಾಗುತ್ತದೆ . ‘ ದೇವರ ಕಂಬಳ ’ ಮತ್ತು ‘ ಅರಸು ಕಂಬಳ ’ ಸ್ಪರ್ಧಾತ್ಮಕವಾದುವು . ಅವೇ ಇಂದು ಆಧುನಿಕ ಕಂಬಳದ ಹೆಸರಿನಲ್ಲಿ ಜನಪ್ರಿಯವಾಗಿವೆ . ನವೆಂಬರ್ ‌ ನಿಂದ ಮಾರ್ಚ್ ‌ ವರೆಗಿನ ಐದು ತಿಂಗಳ ಕಾಲವೆಂದರೆ ಅದು ಕಂಬಳದ ಕಾಲ . ಆ ಸಮಯದಲ್ಲಿ ಉಡುಪಿ , ಕಾರ್ಕಳ , ಹಳೆಯಂಗಡಿ , ಮುಲ್ಕಿ , ಮಂಗಳೂರು , ಕಾಂತಾವರ , ಪುತ್ತೂರು , ಬಂಟ್ವಾಳ , ಮಂಜೇಶ್ವರ ಮೊದಲಾದೆಡೆ ಕಂಬಳ ಓಟಗಳು ವಿಜೃಂಭಣೆಯಿಂದ ಜರುಗುತ್ತವೆ .   ಎಲ್ಲ ಕಡೆಗಳಂತೆ ಇಲ್ಲಿ ಸಹಾ ಇಲ್ಲಿನ ಪ್ರಾದೇಶಿಕ ಆಚರಣೆಗಳು ನಾಗರೀಕತೆಯ ಮಾಯಾ ಪರದೆಯ ಅಡಿಯಲ್ಲಿ ಮರೆಯಾಗುತ್ತಿದ್ದರೂ ಕೆಲವಾದರೂ ಜಾನಪದ ಆಚರಣೆಗಳು ತಮ್ಮ ಮಣ್ಣಿನ ಸೊಗಡನ್ನು ಉಳಿಸಿಕೊಂಡಿವೆ . ಅಂತಹ ಜಾನಪದ ಅಚರಣೆಗಳಲ್ಲಿ ಕಂಬಳ ಪ್ರಮುಖವಾದುದು . ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ...

ಸುಲ್ತಾನ್ ಬತ್ತೇರಿ

Image
ಸುಲ್ತಾನ್ ಬತ್ತೇರಿ 1940ರಲ್ಲಿ ಕರಾವಳಿ ನಗರ ಮಂಗಳೂರು ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಹೆಸರು ವಾಸಿಯಾಗಿದೆ. ಹಾಗೂ ಯಾತ್ರಿಕರ ಪ್ರವಾಸಿ ತಾಣವೂ ಹೌದು. ಆನಮೇಕ ರಾಜ ಮಹರಾಜರು ಈ ಪ್ರದೇಶದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು. ಇದರಲ್ಲಿ ಮಂಗಳೂರಿನ ಬೋಳುರಿನ ಸುಲ್ತಾನ್ ಬತ್ತೇರಿ ಒಂದು. ಬ್ರಿಟಿಷ್‌ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರ ಮೈಸೂರು ಹುಲಿ ಟಿಪ್ಪುಸುಲ್ತಾನನು 1784 ರಲ್ಲಿ ಇದನ್ನು ನಿರ್ಮಿಸಿದನು. ಐತಿಹಾಸಿಕವಾಗಿ ಮಹತ್ವವಾಗಿರುವ ಈ ರಾಷ್ಟ್ರೀಯ ಸ್ಮಾರಕವು ಇತ್ತೀಚಿಗೆ ನವೀಕರಣಗೊಂಡಿದ್ದು, ಸ್ವಾತಂತ್ರ್ಯ ಹೋರಾಟದ ದಿವ್ಯ ಕುರುಹಾಗಿ ಉಳಿದಿದೆ. ಈ ಕೋಟೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಒಂದು ಚಿಕ್ಕ ಕಾವಲು ಗೋಪುರ ಮಾದರಿಯ ಕೋಟೆಯಾಗಿದ್ದರೂ ಕೋಟೆಯ ಸುತ್ತಮುತ್ತ ಫಿರಂಗಿಗಳನ್ನು ಸ್ಥಾಪಿಸಲಾಗಿದೆ. ಮತ್ತು ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ  ರಚಿತವಾಗಿದೆ. ಈ ಕೋಟೆಯ ಅಡಿಭಾಗದಲ್ಲಿ ಸೈನಿಕರ ವಿಶ್ರಾಂತಿ ಕೋಣೆ ಇದೆ. ಮತ್ತು ಸುರಂಗ ಮಾರ್ಗವೂ ಇದೆ ಆದರೆ ಈಗ  ಸಾರ್ವಜನಿಕರಿಗೆ ಇದನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಿಯ ಸ್ಮಾರಕವಾಗಿ ಇದು ಘೋಷಣೆ ಯಾದ್ದರಿಂದ ಕೇಂದ್ರ ಪುರತತ್ವ ಇಲಾಖೆ ಇದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.  ಸುಲ್ತಾನ್ ಬತ್ತೇರಿ ಸೂರ್ಯಾಸ್ತದ ವಿಹಂಗ...

ಮಂಗಳೂರು ಟೈಲ್ಸ್..

Image
ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು. ಬಡವರು ಮನೆ ಕಟ್ಟಲು ಮುಳಿಹುಲ್ಲನ್ನು ಆಶ್ರಯಿಸುತ್ತಿ ದ್ದರೆ, ಶ್ರೀಮಂತರು ಹೆಂಚನ್ನು ಬಳಸುತ್ತಿದ್ದರು.ಸ್ವಾತಂತ್ರಪೂರ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಹೆಂಚು ಗಳು ‘ಮಂಗಳೂರು ಹೆಂಚು’ ಎಂದೇ ಪ್ರಸಿದ್ಧಿ ಪಡೆದಿತ್ತು. ಬ್ರಿಟಿಷರು ಕೂಡ ಇಲ್ಲಿನ ಹೆಂಚಿಗೆ ತಲೆ ತೂಗಿದ್ದರು. ಯುರೋಪ್, ಆಫ್ರಿಕಾ ಖಂಡ ಗಳಿಗೆ ಹಾಗೂ ದೇಶಾ ದ್ಯಂತ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ನೂರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರ ಯಿಸಿದ್ದವು. ಸಾವಿರಾರು ಕಾರ್ಮಿಕರ ಬದುಕನ್ನು ಇದು ಹಸನುಗೊಳಿಸಿತ್ತು.ಆದರೆ, ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರಿಟ್ ಮಯವಾಗ ತೊಡಗಿತು. ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರೂ ಆರ್‌ಸಿಸಿ ಕಟ್ಟಡ ನಿರ್ಮಾಣ ಶುರುವಿಟ್ಟರು. ಹಾಗಾಗಿ ಇದೀಗ ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಆರ್‌ಸಿಸಿ ಮನೆಗಳನ್ನು ಕಾಣಬಹುದು. ಹೆಂಚಿನ ಮನೆ ನಿರ್ಮಾಣಕ್ಕೆ ಮುಂದಾ ದರೆ ಅಂತಹವರನ್ನು ತಾತ್ಸಾರದ ಭಾವನೆ ಯಿಂದ ನೋಡುವವರಿಗೂ ಇಂದಿನ ಕಾಲದಲ್ಲಿ ಕೊರತೆ ಇಲ್ಲ. ಹಾಗಾಗಿ ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡ ಗಳೇ ನಿರ್ಮಾಣ ವಾಗುತ್ತಿದೆ. ಇದರ ನೇರ ಪರಿಣಾಮ ಹೆಂಚು ಉದ್ಯಮದ ಮೇಲಾಗಿದೆ.ಸ್ವರ್ಣ ಯುಗ ದಲ್ಲಿದ್ದ ಮಂಗ ಳೂರು ಹೆಂಚಿನ ಸ್ಥಿತಿ ಇದೀಗ ಆದೋ ಗತಿಗೆ ಇಳಿಸಿದ್ದು, ಯಾರೂ ಕೇಳುವವರಿಲ್ಲದ ಸ್ಥಿತಿ ನಿರ್ಮ...