ದಕ್ಷಿಣಕನ್ನಡದ ಗಾಂಧಿ ಕಾರ್ನಾಡ್ ಸದಾಶಿವರಾಯ
ಕಾರ್ನಾಡ್ ಸದಾಶಿವ ರಾವ್ ರವರು ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು.ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು.
ಕಾರ್ನಾಡ್ ಸದಾಶಿವರಾಯರು ಹುಟ್ಟಿದ್ದು ಮಂಗಳೂರಿನಲ್ಲಿ ೧೮೮೧ ರಲ್ಲಿ. ಅವರು ಅತ್ಯಂತ ಶ್ರೀಮಂತ ವಕೀಲರಾಗಿದ್ದ ರಾಮಚಂದ್ರರಾಯರ ಏಕಮಾತ್ರ ಪುತ್ರ. ಹುಡುಗನಾಗಿದ್ದಾಗಲೂ ಕೊಡುವುದರಲ್ಲಿಯೇ ಸಂತೋಷ. ತನ್ನ ಪುಸ್ತಕ, ಆಟದ ಸಾಮಾನುಗಳನ್ನು ಬಡ ಹುಡುಗರಿಗೆ ಹಂಚಿ ಬಂದು ತಂದೆಯಿಂದ ಬೈಸಿಕೊಂಡದ್ದು ಅನೇಕ ಬಾರಿ. ಸದಾಶಿವರಾಯರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ನಂತರ ಮುಂಬೈನಲ್ಲಿ ವಕೀಲಿ ಶಿಕ್ಷಣ ಪಡೆದರು.
ಆಗ ದೇಶದಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದ್ದ ಸ್ವದೇಶೀ ಆಂದೋಲನ ಅವರನ್ನು ಸೆಳೆದು ಕೊಂಡಿತು. ತಾವೂ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನ ಮಾಡಿ, ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ, ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು. ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಹರಿಜನರ ಪ್ರವೇಶವನ್ನು ಜನರ ಮನವೊಲಿಸಿ ಸಾಧಿಸಿದರು.
ಕಾರ್ನಾಡ್ ಸದಾಶಿವರಾಯರು ದಕ್ಷಿಣಕನ್ನಡದ ಗಾಂಧಿಯೆಂದೇ ವಿಖ್ಯಾತರಾದವರು. ಆಗರ್ಭ
ಶ್ರೀಮಂತರಾಗಿದ್ದ ಅವರು ತಮ್ಮದೆಲ್ಲ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀರಿನಂತೆ ಚೆಲ್ಲಿದವರು. ಸಾಯುವಾಗ ಅವರ ಜೇಬಿನಲ್ಲಿ ಒಂದು ಪೈ ಕೂಡಾ ಇರಲಿಲ್ಲ.
ಕಾರ್ನಾಡ್ ಸದಾಶಿವರಾಯರು ಹುಟ್ಟಿದ್ದು ಮಂಗಳೂರಿನಲ್ಲಿ ೧೮೮೧ ರಲ್ಲಿ. ಅವರು ಅತ್ಯಂತ ಶ್ರೀಮಂತ ವಕೀಲರಾಗಿದ್ದ ರಾಮಚಂದ್ರರಾಯರ ಏಕಮಾತ್ರ ಪುತ್ರ. ಹುಡುಗನಾಗಿದ್ದಾಗಲೂ ಕೊಡುವುದರಲ್ಲಿಯೇ ಸಂತೋಷ. ತನ್ನ ಪುಸ್ತಕ, ಆಟದ ಸಾಮಾನುಗಳನ್ನು ಬಡ ಹುಡುಗರಿಗೆ ಹಂಚಿ ಬಂದು ತಂದೆಯಿಂದ ಬೈಸಿಕೊಂಡದ್ದು ಅನೇಕ ಬಾರಿ. ಸದಾಶಿವರಾಯರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ನಂತರ ಮುಂಬೈನಲ್ಲಿ ವಕೀಲಿ ಶಿಕ್ಷಣ ಪಡೆದರು.
ಆಗ ದೇಶದಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದ್ದ ಸ್ವದೇಶೀ ಆಂದೋಲನ ಅವರನ್ನು ಸೆಳೆದು ಕೊಂಡಿತು. ತಾವೂ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನ ಮಾಡಿ, ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ, ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು. ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಹರಿಜನರ ಪ್ರವೇಶವನ್ನು ಜನರ ಮನವೊಲಿಸಿ ಸಾಧಿಸಿದರು.
ದುರಂತನಾಯಕ ಕಾರ್ನಾಡ್ ಸದಾಶಿವರಾಯರ ಪೂರ್ವಿಕರ ಆಸ್ತಿ ಎಲ್ಲೆಲ್ಲೂ ಇತ್ತು. ಯಾರೋ ಹೇಳಹೆಸರಿಲ್ಲದವರುಅವರ ಆಸ್ತಿಯನ್ನು ನುಂಗಿ ಹಾಕಿದರು. ಬಾವುಟ ಗುಡ್ಡೆಯಲ್ಲಿ ಕಾರ್ನಾಡರ ಹೆಸರಿನಲ್ಲಿ ಒಂದು ಟ್ರಸ್ಟ್, ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರನ್ನಿಟ್ಟದ್ದು ಹೊರತು ಪಡಿಸಿದರೆ ಅವರ ಯಾವುದೇ ಕುರುಹುಗಳಿಲ್ಲ. ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ಅವರ ಮನೆ ಇದ್ದ ಕಟ್ಟಡವನ್ನು ಎಸ್ ಸಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ 9 ವರ್ಷಗಳ ಹಿಂದೇಯೇ ಕೆಡವಿ ಹಾಕಿ ಇದೀಗ ಬಹುಮಹಡಿ ಕಟ್ಟಡ ನಿರ್ಮಾಣವಾಗಿದೆ, ಈ ಮನೆಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಹಕಾರಿ ಬ್ಯಾಂಕ್ ಪ್ರಾರಂಭವಾಗಿತ್ತು ಬಹುಷ ಹೆಚ್ಚಿನವರಿಗೆ ತಿಳಿದಿಲ್ಲ. ಕಾರ್ನಾಡರ ಸಮಾಧಿ ಮಂಗಳೂರಿನ ನಂದಿಗುಡ್ಡ ರುದ್ರಭೂಮಿಯಲ್ಲಿ ಇಂದಿಗೂ ಕಾಣಬಹುದು. ಬೆಂಗಳೂರಿನಲ್ಲಿ ಸದಾಶಿವನಗರ ಎಂಬ ಬಡಾವಣೆ ಇದೆ. ಅದು ನಗರದ ಶ್ರೀಮಂತರ, ಪ್ರಭಾವಶಾಲಿಗಳ ವಸತಿ. ತಮ್ಮ ಜೀವನದ ಕೊನೆಯಲ್ಲಿ ಏನನ್ನೂ ಉಳಿಸಿಕೊಳ್ಳದೇ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಅಕ್ಷರಶಃ ನಿರ್ಗತಿಕರಾಗಿ, ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಕೂಡ ಇಲ್ಲದೇ ಪ್ರಾಣ ನೀಗಿದ, ಕರ್ನಾಟಕದ ಹೆಮ್ಮೆಯ ಪುತ್ರ ಕಾರ್ನಾಡ್ ಸದಾಶಿವರಾಯರ ಹೆಸರನ್ನೇ ಈ ಬಡಾವಣೆ ಹೊಂದಿದೆ ಎಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.


Comments
Post a Comment