Posts

ಮಂಗಳೂರಿನ ಕೆಂಪು ಕೋಟೆ 'ಕಲೆಕ್ಟರ್ ಆಫೀಸ್'...!

Image
ವಿಶಾಲವಾದ ಕರಾವಳಿ ಪ್ರದೇಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಶತಮಾನಗಳ ಇತಿಹಾಸವಿದೆ.ಇದಕ್ಕೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಟ್ಟಡವೇ ಸಾಕ್ಷಿ.ಕೆ0ಪು ಮುರ ಕಲ್ಲಿನಿಂದ ಕಟ್ಟಿದ ಈ ಭವ್ಯವಾದ ಕಟ್ಟಡದ ನೋಟವೇ ಚೆಂದ.ಪ್ರಸ್ತುತ ಇದನ್ನು ಪುರತತ್ವ ಇಲಾಖೆಗೆ ಒಪ್ಪಿಸುವ ಕಾರ್ಯ ಆರಂಭಗೊಂಡಿದೆ.ಪೋರ್ಚುಗೀಸರು,ಮ್ಯಸೂರು ಹುಲಿ ಟಿಪ್ಪು ಸುಲ್ತಾನ್, ವಿಜಯ ನಗರದ ಅರಸರ ಆಳ್ವಿಕೆ ನಂತರ ಬ್ರಿಟಿಷರು ಇಲ್ಲಿಂದಲೇ ಆಡಳಿತ ನಡೆಸಿದ್ದರು. 1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು.ಇದುವರೆಗೆ 120 ಜಿಲ್ಲಾಧಿಕಾರಿಗಳನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1799 ರಲ್ಲಿ ಬ್ರಿಟೀಷ್ ಅಧಿಕಾರಿ ಮೇಜರ್ ಮುನ್ರೋ ಅವರು ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.1905 ರಲ್ಲಿ AHS ಬಹದ್ದೂರ್ ಅವರು ಅಧಿಕಾರ ವಹಿಸಿದ ಮೊದಲನೇ ಭಾರತೀಯ ಜಿಲ್ಲಾಧಿಕಾರಿಯಾಗಿದ್ದಾರೆ.M.ಸುಬ್ರಹ್ಮಣ್ಯ ಅವರು 1940 ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಮೊದಲ IAS ಅಧಿಕಾರಿಯಾಗಿದ್ದಾರೆ.

ಹ್ಯಾಮಿಲ್ಟನ್ ಸರ್ಕಲ್(Hamilton circle)

Image
ಕರಾವಳಿಯ ಸುಂದರ ನಗರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಹತ್ತಿರ ಇರುವ ಹ್ಯಾಮಿಲ್ಟನ್ ಸರ್ಕಲ್ ಪೂರ್ವ ಮಾಹಿತಿ ಹೆಚ್ಚಿನವರಿಗೆ ಗೊತ್ತಿರಕ್ಕಿಲ್ಲ. ಕರಾವಳಿ ಕರ್ನಾಟಕದ ಪ್ರಮುಖ ಬಂದರು ನಗರ ಮಂಗಳೂರು ಮತ್ತು ದೂರದ ಕೆನಡಾ ದೇಶದ ಪ್ರಮುಖ ಪಟ್ಟಣ ಹ್ಯಾಮಿಲ್ಟನ್ ನಡುವಿನ ಅವಿನಾಭಾವ ಸಂಬಂಧದ ಫಲವೇ ಈ ವ್ರತ್ತ.ಈ ಭಾಂಧಾವ್ಯ ಕುದುರಿದ ಹಿನ್ನೆಲೆ ವಿಶೇಷವಾದುದು.ಸೂಮಾರು 40 ವರ್ಷಗಳ ಹಿಂದೆ ಕೆನಡಾದ ಹ್ಯಾಮಿಲ್ಟನ್ ಮೇಯರ್ ಮಂಗಳೂರಿಗೆ ಆಗಮಿಸಿದ್ದರು,ಆ ಸಂದರ್ಭದಲ್ಲಿ ಇಲ್ಲಿನ ಪರಿಸರ,ಹವಾಮಾನ,ಪ್ರಕ್ರತಿಯ ಸೊಭಗು ಹ್ಯಾಮಿಲ್ಟನ್ ಮಾದರಿಯಲ್ಲೇ ಇರುವದನ್ನು ಕಂಡು ಮಂಗಳೂರು ಮತ್ತು ಹ್ಯಾಮಿಲ್ಟನ್ ನಡುವೆ ಭಾಂಧವ್ಯ ಹೊಂದುವ ಆಸೆ ವ್ಯಕ್ತ ಪಡಿಸಿದ್ದರು. ಈ ಭಾಂಧವ್ಯದ ಫಲವೇ ಈ ವ್ರತ್ತ.

ರಾಂಪಣ್ಣನ ಹೋಟೆಲ್..

Image
ಕ0ಕನಾಡಿ ರಾಂಪಣ್ಣನ ಹೋಟೆಲ್ ಎಂದರೆ ಗೊತ್ತಿರದವ ಬಹುಶ ಮಂಗಳೂರಿನಲ್ಲಿ ಇರಕ್ಕಿಲ್ಲ.ನಗರದ ಕಂಕನಾಡಿ ಮತ್ತು ಹಂಪನಕಟ್ಟೆಯಲ್ಲಿ ರಾಜ್ ಕಮಾಲ್ ಎಂಬ 2 ಹೋಟೆಲುಗಳನ್ನು ನಡೆಸುತಿದ್ದ ರಾಂಪಣ್ಣ ಕಷ್ಟಜೀವಿ.ಜೀವನವೇ ದುಸ್ತರವಾಗಿರುವ ಆ ದಿನಗಳಲ್ಲಿ ಹೊಟ್ಟೆ ತುಂಬಾ ಊಟ ಸಿಗುವ ಏಕ ಮಾತ್ರ ಹೋಟೆಲ್ ಇವರಾದಗಿತ್ತು.ತಮ್ಮದೇ ಮನೆಯಲ್ಲಿ ಮಾಡಿದ ಅಕ್ಕಿ,ತರಕಾರಿಯನ್ನು ತಂದು ಅಡುಗೆ ಮಾಡಿ ಅತ್ಯಂತ ಕಡಿಮೆ ದುಡ್ಡಿನಲ್ಲಿ ಜನರಿಗೆ ಉಣಬಡಿಸುತಿದ್ದರು ಎಂದರೆ ನೀವೂ ಲೆಕ್ಕ ಹಾಕಬಹುದು.ಅದರಲ್ಲೂ ರಾಜ್ ಕಮಾಲ್ ಘಮಘಮಿಸುವ ಬಿರಿಯಾನಿ ಮತ್ತು ಬಂಗುಡೆ-ಬೂತಾಯಿ ಪುಳಿಮುಂಚಿಗೆ ಭಾರಿ ಫೇಮಸ್ಸು.ಮಂಗಳೂರಿನ ಜನ ಅಲ್ಲದೇ ಶಾಲಾ - ಕಾಲೇಜುಗಳ ಮಕ್ಕಳು ಮದ್ಯಾಹ್ನದ ಊಟಕ್ಕೆ ಅವಲಂಬಿಸಿದ್ದದು ಇದೇ ರಾಂಪಣ್ಣನ ಹೋಟೆಲ್.ಹೊಟ್ಟೆ ತುಂಬಾ ಎಷ್ಟು ಬೇಕಾದರು ಊಟ ಮಾಡಬಹುದಾದರೂ,ಅನ್ನವನ್ನು ವ್ಯರ್ಥಮಾಡುವಂತಿರಲಿಲ್ಲ.ಮಾಡಿದರೆ ಅದಕ್ಕೆ ಎ0ಟಾಣೆ ದಂಡ ತೆರಬೇಕಾಗಿತ್ತು..! ಅನಕ್ಷರಸ್ತರಾದರೂ,ಬಡವರ-ದೀನದಲಿತರ ಬಗ್ಗೆ ಸದಾ ಖಾಳಾಜಿ ಹೊಂದಿದ್ದ ರಾಂಪಣ್ಣ ರಿಗೆ ಕಂಬಳದ ಬಗ್ಗೆ ವಿಶೇಷ ಆಸಕ್ತಿ. ತಾವು ಕೂಡ ಕಂಬಳದ ಕೋಣಗಳನ್ನು ಸಾಕಿದ್ದರು.ರಾಜಕೀಯ ನಂಟು ಸ್ವಲ್ಪ ಹೆಚ್ಹಿತ್ತು.ಗುಂಡೂರಾವ್, ಮೊಯಿಲಿ, ಜನಾರ್ದನ ಪೂಜಾರಿ ಅವರಿಗೆ ಅತ್ಯಂತ ನಿಕಟರಾಗಿದ್ದರು, ಪೂಜಾರಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಧನ ಸಹಾಯ ಮಾಡಿದ್ದರು.! ಸ0ತಾನ ಭಾಗ್ಯ ಇಲ್ಲದ ರಾಂಪಣ್ಣ ಅವರು ಇಹಲೋಕ ತ್ಯಜಿಸಿ ಇಂದಿಗೆ 23 ...

ತುಳು ಚಿತ್ರರಂಗದ ಆ ದಿನಗಳು..

Image
ತುಳು ನಾಡು ಎಂದು ಕರೆಯಲ್ಪಡುವ ಕರ್ನಾಟಕ ದಕ್ಶಿಣ ಕರಾವಳಿ ಜಿಲ್ಲೆಗಳು ಕಲಾ ವ್ಯವಸಾಯಗಳ ಆಡುಂಬೊಲ.ಇದುವೇ ಇಲ್ಲಿ ತನ್ನದೇ ಭಾಷೆಯ ಚಲನ ಚಿತ್ರರಂಗಕ್ಕೆ ನಾಂದಿಯಾಯಿತು.ಇದುವರೆಗೆ ನಾಡಿಗೆ ಸುಮಾರು 40 ಸಿನಿಮಾಗಳನ್ನು ತುಳು ಚಿತ್ರರಂಗಕ್ಕೆ 4 ದಶಕಗಳ ಇತಿಹಾಸ ಇದೆ. ಕೆಲವೇ ಲಕ್ಷ ತುಳುವರು ಇದ್ದರೂ ಈ ಸುಂದರ ಭಾಷೆಯಲ್ಲಿ ನಿರ್ಮಾಣಗೊಂಡ ಅನೇಕ ಚಿತ್ರಗಳು ಕ್ಯಾನೆ,ಕೈರೊ,ಹಾಂಕಾಂಗ್ ಗಳ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆಯನ್ನು ಪಡೆದಿವೆ.ಶತ ದಿನವನ್ನು ಕಂಡ ಬಂಗಾರ್ ಪಟ್ಲೇರ್ ರಾಷ್ಟ್ರಪತಿಯವರ ರಜತ ಪದಕವನ್ನು ಪಡೆದಿದೆ.ಇವುಗಳ ಮಧ್ಯೆ ಅನೇಕ ಏಳು ಬೀಳುಗಳನ್ನು ಕಂಡಿರುವ ಈ ವಿಶಿಷ್ಟ ತುಳು ಚಿತ್ರರಂಗಕ್ಕೆ ತನ್ನದೇ ಆದ ಇತಿಹಾಸ ಇದೆ.ತುಳು ನಾಟಕಗಳೇ ಹೆಚ್ಚಾಗಿ ಪ್ರದರ್ಶನ ಗೊಳ್ಳುತಿರುವ ಆ ಕಾಲಕ್ಕೆ ಚಿತ್ರರಂಗ ತೀರಾ ಹೊಸತು ಎನ್ನಬಹುದು.ಇದೇ ಸಮಯದಲ್ಲಿ ಎಸ್.ಆರ್. ರಾಜನ್ ಎಂಬವರು ಇತರರ ಸಹಾಯದೊಂದಿಗೆ 1970 ರಲ್ಲಿ ಎನ್ನ ತಂಗಡಿ ಎಂಬ ಪ್ರಪ್ರಥಮ ತುಳು ಚಿತ್ರವನ್ನು ನಾಡಿಗೆ ಸಮರ್ಪಿಸಿದರು.ದಿವಂಗತ ಲೋಕಯ್ಯ ಶೆಟ್ಟಿ,ಕವಿತ,ದಿಲಿಪ್ ಮತ್ತಿತರ ತಾರಾಗಣದಲ್ಲಿ ನಿರ್ಮಾಣಗೊಂಡ ಈ ಚಿತ್ರ ತಾಂತ್ರಿಕವಾಗಿ ಕಳಪೆ ಆಗಿದ್ದರಿಂದ ಆ ದಿನಗಳಲ್ಲಿ ಅಪಾರ ನಷ್ಟ ಅನುಭವಿಸ ಬೇಕಾಯಿತು.ಆ ನಂತರ ನಿರ್ಮಾಣವಾದ ದಾರೆದ ಬೊಡೆದಿ ಮಂಗಳೂರಿನ ರೂಪವಾಣಿ ಟಾಕೀಸಿನಲ್ಲಿ 8 ವಾರಗಳ ಕಾಲ ನಡೆದಿತ್ಥು.ಕನ್ನಡದ ನಟಿ ಲೀಲಾವತಿ,ಕೆ.ಎನ್ನ್.ಟೇಲರ್ ಈ ಚಿತ್ರದಲ್ಲಿ ನಟಿಸಿದ್ದರು.ತರುವ...

ಆ ದಿನಗಳು ಒಂದು ನೆನಪು....

Image
ಇದು ಕೋರ್ಟ್ ಬೆಂಚ್ ಹೌದು, ಆದರೆ ನ್ಯಾಯಾಧೀಶರ ಬೆಂಚ್ ಅಲ್ಲ ! ಆದರೆ ಈ ಬೆಂಚು ಮ0ಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಇದೆ.ಸ್ವಾತಂತ್ರ್ಯ ಪೂರ್ವದಲ್ಲಿ ಈ ಬೆಂಚಿನ ಮೇಲೆ ಕೂರಲು ಡಿಮಾಂಡೋ ಡಿಮಾಂಡ್. ಎತ್ತರ ಪ್ರದೇಶದಲ್ಲಿ ಇದ್ದ ಬೆಂಚಿಗೆ ಅಂದು ರಾಜ ಮರ್ಯಾದೆ ಇತ್ತು. ಎಷ್ಟೋ ಜನರ ಪ್ರೀತಿ ಬೆಸುಗೆ ಬೆಂಚಿಗಿತ್ತು. ಪ್ರೇಮಿಗಳ ಪ್ರೀತಿಯ ಪಿಸುಮಾತುಗಳಿಗೆ ಮೂಕ ಸಾಕ್ಷಿಯಾಗಿತ್ತು. ಆದರೆ ಈಗ ಅಸ್ರ್ಪಶ್ಯವಾಗಿದೆ. ಬೆಂಚು ಇತ್ತೀಚೆಗಷ್ಟೆ ಹೊಸ ಬಣ್ಣ ಬಳಿದುಕೊಂಡರೂ ಅದಕ್ಕೆ ಹಳೆ ನೆನಪೇ ಸುಂದರ ಎಂದೆಸಿರಬಹುದೇನೊ? ನವೆ0ಬರ್ 5 ರ0ದು 1941 ರಲ್ಲಿ ರಚಿಸಿದ ಅತ್ಯಂತ ಅಪರೂಪದ ಕಲಾಕೃತಿ ಹೊಂದಿರುವ ಈ ಹಾಸು ಮಾತನಾಡು ವಂತಿದ್ದರೆ ಅದೆಷ್ಟೋ ಕತೆಗಳನ್ನು ಹೇಳುತಿತ್ತೋ ಏನೋ..ವಿಠಲ್ ಶಾಂತರಂ ಎ0ಬವರು ತನ್ನ ತಂದೆ ಶಾಂತರಂ ಮಂಗೇಶ್ ನೆನಪಿಗೆ ಈ ಬೆಂಚನ್ನು ಇಲ್ಲಿ ಸ್ಥಾಪಿಸಿದ್ದರು ಎಂದು,ಇದನ್ನು ಅಂದಿನ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎನ್. ಗೋಪಾಲನ್ ಅವರು ಉದ್ಘಾಟಿಸಿದ್ದಾಗಿ ಅದರಲ್ಲಿನ ದಾಖಲೆ ಹೇಳುತ್ತದೆ.ಗುಡ್ಡದ ಎತ್ತರದಲ್ಲಿ ಈ ಬೆಂಚನ್ನು ಹಾಕಲಾಗಿದ್ದು, ಇಲ್ಲಿಂದ ಇಡೀಯ ಮಂಗಳೂರು ನೋಟ ಕಾಣುವಂತಿತ್ತು.ಆದರೆ ಈದೀಗ ಈ ಪ್ರದೇಶ ಮರ ಗಿಡ,ಕಸಕಡ್ಡಿಗಳಿ0ದ ತುಂಬಿದೆ.ಇಲ್ಲಿನ ಪುರಾತನ ಕಟ್ಟಡಗಳನ್ನು ಕಡವಿ ಹೊಸ ಕಟ್ಟಡಗಳ ಕಟ್ಟುವ ಕಾಮಗಾರಿ ನಡೆಯುತ್ತಿದೆ.ಈ ಸಂದರ್ಭದಲ್ಲಿ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಪಳೆಯುಳಿಕೆಗಳು ಭ...