Posts

ಮಂಗಳೂರಿನ ಹಂಪನಕಟ್ಟಾ ಸರ್ಕಾರಿ ಕಾಲೇಜ್

Image
ಮಂಗಳೂರು ಕೇಂದ್ರವಾಗಿರುವ ಈ ಶೈಕ್ಷಣಿಕ ಇತಿಹಾಸದಲ್ಲಿ ಈ ಕೆಂಪು ಕಲ್ಲಿನ ಸರ್ಕಾರಿ ಕಾಲೇಜು ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಪಡೆದಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಾಲೇಜಿನಲ್ಲಿ ಮೂರು ಪಾರಂಪರಿಕ ಕಟ್ಟಡಗಳಿವೆ. ಆಡಳಿತ ಕಚೇರಿ, ರವಿಂದ್ರ ಕಲಾಭವನ, ಹಾಗೂ ಕಾಮರ್ಸ್ ಬ್ಲಾಕ್ ಗಳನ್ನು ಇದು ಹೊಂದಿದೆ.  ಅದ್ಬುತ ವಾಸ್ತು ಹಾಗೂ ಇಂಡೋ ಸಾರಸೆನಿಕ್ ಶೈಲಿಯಲ್ಲಿ ಕೇವಲ ಕೆಂಪುಮುರ ಕಲ್ಲು  ಹಾಗೂ ಮರಳು ಹಾಗೂ ಮಂಗಳೂರು ಹೆಂಚು ಬಳಸಿ ಕಟ್ಟಲಾದ ಈ  ಕಟ್ಟಡಗಳು ಶತಮಾನವನ್ನು ದಾಟಿವೆ. ಸಾಹಿತಿ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಂಜೆ ಮಂಗೇಶ್ ರಾವ್, ಮಂಜೇಶ್ವರ ಗೋವಿಂದ ಪೈ, ಬೆನೆಗಲ್ ರಾಂ ರಾವ್, ಡಾ. ಶಿವರಾಂ ಕಾರಂತ್,ಡಾ. ಎ.ಬಿ. ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಡಾ.ಯು.ಪಿ ಮಲ್ಯ, ಕುದ್ಮುಲ್ ರಂಗ ರಾವ್, ಸೂರ್ಯ ನಾರಾಯಣ್ ಅಡಿಗ, ಎ.ಬಿ. ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಎ.ಬಿ. ರಾಮ್ ರಾವ್, ಕೆನರಾ ಬ್ಯಾಂಕಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್, ಹಿರಿಯ ಸಹಕಾರಿ ಮೊಳಹಳ್ಲಿ ಶಿವರಾವ್ , ಕಮಲಾ ದೇವಿ ಚಟ್ಟೋಪಾಧ್ಯಾಯ, ಅನೇಕ ಮಹಾನ್ ಸಾಧಕರು ಈ ಶಾಲೆಯಲ್ಲಿ ಕಲಿತವರು.! ಈಗಿನ ಡಾ. ವೀರಪ್ಪ ಮೊಯಿಲಿ, ಪಿ.ಎಂ. ಸಾಯಿದ್, ಡಿ.ಕೆ. ಚೌಟ, ಸಂತೋಷ್ ಕುಮಾರ್ ಗುಲ್ವಾಡಿ, ಎಂ.ವಿ. ಕಾಮತ್, ಜಸ್ಟಿಸ್ ಜಗನ್ನಾಥ ಶೆಟ್ಟಿ, ಬಿ.ರಮನಾಥ ರೈ, ಹೀಗೇ ಅನೇಕ ಮಹನೀಯರು ಇಲ್ಲಿನ ಹಳೇ ವಿದ್ಯಾರ್ಥಿ...

ಮಂಗಳೂರಿನಲ್ಲಿ ಪೋಲಿಸ್ ಇತಿಹಾಸ..

Image
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಪೋಲಿಸರ ಪಾತ್ರ ಮಹತ್ವದ್ದು,ಇಂದಿನ ಸಂಘರ್ಷಮಯ ವಾತಾವರಣದ ಸಮಾಜದಲ್ಲಿ ಪೋಲಿಸರಿಲ್ಲದ ಸಾಮಾಜ ಊಹೆಗೂ ನಿಲುಕದ್ದು. ಆರಂಭದಲ್ಲಿ ಯಾವುದಾರೊಂದು ಗಲಭೆ, ಆಶಾಂತಿ ಸಾಮಾಜದಲ್ಲಿ ಉಂಟಾದಗ  ಆ ಸಮಾಜದ ಮುಖಂಡ ತಮ್ಮ ಯೋಧರನ್ನೇ ಬಳಸುತ್ತಿದ್ದ. ಇಟಲಿಯ ರೋಮ್ ರಾಜ್ಯದ ಚಕ್ರವರ್ತಿ ಸೀಸರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೋಲಿಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ ಎಂದು ಇತಿಹಾಸ ಹೇಳುತ್ತಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೇ ಇದರ ಕೆಲಸವಾಗಿತ್ತು. ಈ ವ್ಯವಸ್ಥೆ ಸುಮಾರು 300 ವರ್ಷಗಳ ವರೆಗೆ ಹಾಗೇ ಮುಂದು ವರೆದಿತ್ತು. ಸುಮಾರು 7 ನೇ ಶತಮಾನದಲ್ಲಿ ಭದ್ರತೆಗಾಗಿ ಪೋಲಿಸ್ ವ್ಯವಸ್ಥೆ ಬೇಕೆಂಬ ಆಲೋಚನೆ ಮೂಡಿಬಂತು. ಈ ಪೋಲಿಸ್ ಪಡೆ ಕೇವಲ ರಾಜಾಜ್ಣೆಯನ್ನು ಪಾಲಿಸುವುದಕಿಂತ ಜನತೆ ಮತ್ತು ನಾಡಿನ  ಶಾಸನವನ್ನು ಕಾಪಾಡಬೇಕೆಂಬ ಻ಗತ್ಯ ಭಾವನೆ ಜನರಲ್ಲಿ ಮೂಡಿತು. ಇದೇ ವಿಚಾರ ಆಮೇರಿಕಾ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿ ಪೋಲಿಸ್ ವ್ಯವಸ್ಥೆ ಜಾರಿಗೆ ಬಂತು. ಇಂಗ್ಲೀಷರು ತಮ್ಮ ರಕ್ಷಣೆಗಾಗಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.ಅವರದೇ ಆಡಳಿತವಿದ್ದ ಭಾರತ ದೇಶದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು1792 ಡಿಸೆಂಬರ್ 7 ರಂದು ಈ ವ್ಯವಸ್ಥೆಯನ್ನು ಜಾರಿಗೆ ತಂದರು.1861 ರಲ್ಲಿ ಪೋಲಿಸ್ ಕಾಯಿದೆ ಜಾರಿಗೆ ಬಂತು. ಆದರೆ ಅಂದಿನಿಂದ ಇಂದಿನವರೆಗೆ ಪೋಲಿಸ್ ಸಮವಸ್ತ್ರದಲ್ಲಿ ಹಲವಾರು ಬದಲಾವಣೆಗಳಾಗಿವೆ...

Milagres Church

Image
The Church of Our Lady of Miracles, Milagres, better known as Milagres church, was built by Bishop Thomas de Castro, a Theatine priest of Salsette in 1680. It is thus more that 300 years old.Attached to the Church is the Chapel of St. Monica, the Patroness of the Catholic Mother’s Sodality, the first of its kind in the Diocese when it was started in 1887 by Fr. Torri, S.J. He built the Chapel probably the same year. It contains a magnificent altar with a French painting of St. Monica and her son St. Augustine which is a rare piece of art. In the seventeenth century christianity was in a sorry state on account of a dearth of priests and the rival claims to the territory by the Sees of the Verapoly and Goa. In fact the See of the archibishop of goa was vacant for over twenty-two years. Msgr Antony Brandao was appointed Archibishop later. The Holy See seeing this state of affairs appointed Bishop Thomas de Castro Vicar Apostolic of canara and Malabar. He took up his residence at Calicut b...

ಮಂಗಳೂರು ಕ್ಲಬ್..

Image
ಮಂಗಳೂರು ಕ್ಲಬ್ ಎಂದರೆ ಮಂಗಳೂರಿಗೆ ಪರಿಚಯ ಕಡಿಮೆ.ನಗರದ ಜೆಪ್ಪುವಿನ ಪರಿಸರದಲ್ಲಿ ಇರುವ ಈ ಪ್ರಶಾಂತವಾದ ಸ್ಥಳಕ್ಕೆ ಶತಮಾನದ ಇತಿಹಾಸವಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ದಡದಲ್ಲಿರುವ ಮಂಗಳೂರು ಕ್ಲಬನ್ನು 1876 ರಲ್ಲಿ ನಿರ್ಮಾಣ ಮಾಡಲಾಗಿತ್ತು.ಅಂದಿನ ಬ್ರಿಟೀಶ್ ಆಡಳಿತವಿದ್ದ ಕರಾವಳಿಯ ಈ ಭಾಗದಲ್ಲಿ ಇಂಗ್ಲೀಷ್ ಅಧಿಕಾರಿಗಳ ಮೋಜಿನ ತಾಣವಾಗಿತ್ತು.M.James Moss ಇದರ ಮೊದಲ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದ,ಭಾರತ ಸ್ವಾತಂತ್ರ್ಯಗೊಂಡು 30 ವರ್ಷಗಳ ಬಳಿಕವೂ ಎಂದರೆ 1970 ರ ವರೆಗೂ ಇದನ್ನು ಬ್ರಿಟೀಷರೇ ನಿರ್ವಹಿಸುತ್ತಿದ್ದರು ಎಂಬುದು ಗಮನಾರ್ಹ ವಿಷಯ..! ನಂತರದ ದಿನಗಳಲ್ಲಿ ಇದು ಸ್ಥಳಿಯರ ಆಡಳಿತಕ್ಕೆ ಬಂತು. ಮಂಗಳೂರು ನಗರ ಸೇರಿದಂತೆ ನಾಡಿನ ಹೆಸರಾಂತ ಉದ್ಯಮಿಗಳು ಸೇರಿಕೊಂಡು ಸಮಿತಿ ರಚನೆ ಮಾಡಿ ಇದನ್ನು ನಿರ್ವಹಿಸುತ್ತಿದ್ದಾರೆ. ನಗರದ ಪ್ರತಿಷ್ಡಿತ ಕ್ಲಬ್ ಇದಾದ್ದರಿಂದ ಇದರ ಸದಸತ್ವ ಪಡೆಯುವುದೇ ಹೆಮ್ಮೆಯ ವಿಚಾರ,ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಭರಿಸಬೇಕು..! ಇಂದಿನ ಕಾಲಕ್ಕೆ ತಕ್ಕಂತೆ ಇದು ಆಧುನಿಕರಣಗೊಂಡಿದ್ದು,ಸಂಪೂರ್ಣ ಹವಾನಿಯಂತ್ರಿತ. ಸುಸಜ್ಜಿತ ಈಜು ಕೊಳ, ವಿವಿಧ ಆಟಗಳಿಗಾಗಿ ಕ್ರೀಡಾಂಗಣ,ಕಾರ್ಯಕ್ರಮ ಮತ್ತು ಸಮಾರಂಭಗಳಿಗಾಗಿ ಸಭಾಂಗಣ,ಉಳಕೊಳ್ಳಲು ವಸತಿಗ್ರಹ ಸೇರಿದಂತೆ ಎಲ್ಲವೂ ಇಲ್ಲಿ ಲಭ್ಯ. ಇಂಗ್ಲೇಡ್, ಅಮೇರಿಕಾ,ದುಬೈ, ಜರ್ಮನಿ ಸೇರಿದಂತೆ ವಿಶ್ವದ 60 ಕ್ಕೂ ಹೆಚ್ಚು ರಾಷ್ಡ್ರಗಳ ಗೌರವ ಸದಸತ್ವ ಇಲ್ಲಿದೆ..!...

ಉಳ್ಳಾಲದ ರಾಣಿ ಅಬ್ಬಕ್ಕ..

Image
ರಾಣಿ ಅಬ್ಬಕ್ಕ ಅಥವಾ ಅಬ್ಬಕ್ಕ ಮಹಾದೇವಿ ತುಳುನಾಡನ್ನು ೧೬ನೆ ಶತಮಾನದ ಉತ್ತರಾರ್ಧದಲ್ಲಿ ಆಳಿದ ವೀರ ಮಹಿಳೆ. ಇವಳ ರಾಜಧಾನಿ ಮೂಡುಬಿದಿರೆ. ರೇವುಪಟ್ಟಣ ಉಲ್ಲಾಳ ಉಪಾಂಗ ರಾಜಧಾನಿಯಾಗಿತ್ತು. ಪೋರ್ಚುಗೀಸರು ಸತತ ನಾಲ್ಕು ದಶಕಗಳ ಕಾಲ ಉಲ್ಲಾಳನ ಮತ್ತು ನೆರೆಯ ಪಟ್ಟಣಗಳನ್ನು ಕಬಳಿಸಲು ಪ್ರಯತ್ನಿಸಿದರಾದರೂ ಪೂರ್ತಿ ಜಯಿಸಲಾಗಲ್ಲಿಲ್ಲಾ. ಕಾರಣ ಒಬ್ಬ ಮಹಿಳೆ – ಅಬ್ಬಕ್ಕ. ವೈರಿಯ ಪ್ರತಿ ದಾಳಿಯನ್ನು ವಿಫಲಗೊಳಿಸದ್ದಲ್ಲದೇ ಪ್ರತಿಯಾಗಿ ಅವರು ನೆಲೆಸಿದ್ದ ಕೋಟೆ, ಯುದ್ಧ ನೌಕಾ ನೆಲೆಗಳ ಮೇಲೇ ಪ್ರತಿಯಾಗಿ ಪ್ರಹಾರ ಮಾಡಿ ಅವರನ್ನು ಕೆಚ್ಚೆದೆಯಿಂದ ಹೋರಾಡಿ ಜಯ ಸಾಧಿಸಿದ್ದವಳು ಅಬ್ಬಕ್ಕ. ಇವಳ ಈ ಸಾಹಸದಿಂದಾಗಿಯೆ ಪೋರ್ಚಿಗೀಯರು ತಮ್ಮ ಅಧಿಕಾರವನ್ನು ದಕ್ಷಿಣ ಭಾರತ ಕರಾವಳಿಯ ಮೇಲೆ ಭದ್ರವಾಗಿ ಸ್ಥಾಪಿಸಲಾಗಲ್ಲಿಲ್ಲಾ. ಇತಿಹಾಸದಲ್ಲೆ ಇಂಥ ವೀರ ಸಾಧನೆ ಮಾಡಿದ ಮತ್ತೊಬ್ಬ ಹೆಣ್ಣು ಕಾಣಸಿಗುವುದು ಅತಿ ವಿರಳ. ಇವಳ ಸಾಧನೆಗಳ ಬಗ್ಗೆ ಪ್ರಾದೇಶಿಕ ಭಾಷಯಲ್ಲಿ ಉಲ್ಲೇಖಿತ ಮೂಲಗಳಿಂದ ಹೆಚ್ಚು ತಿಳಿಯದಿದ್ದರು, ಈಕೆ ತನ್ನ ಜೀವಿತಾ ವಧಿಯಲ್ಲೇ ಅಂತ ರಾಷ್ಟ್ರಿಯ ಪ್ರಸಿಧ್ಧಿಯನ್ನು ಗಳಿಸಿದ್ದ ಳೆಂಬುದು ತಿಳಿದು ಬರುತ್ತದೆ.! ಅರಬ್ ಮತ್ತು ಪೋರ್ಚು ಗೀಸರ ಮೂಲಗಳು ಇವಳ ದಿಟ್ಟ ಪ್ರತಿರೋಧ ಹಾಗು ಇವಳ ಸರಳ ಆಚಾರ, ದೄಢ ವಿಚಾರ, ಸಜ್ಜನಿಕೆಯ ಗುರುತುಗಳಾಗಿ ಹಲವಾರು ಘಟನೆಗಳನ್ನು ವಿವರಿಸಿ ಈಕೆಯನ್ನು ಕೊಂಡಾಡಿದ್ದಾರೆ. ಅಬ್ಬಕ್ಕಳ ಕಾಲ, ಜೀವನ, ಆಡಳಿತಗಳ ಬಗ್ಗೆ ಕ್ಲಿಷ್ಟತೆಗಳಿದ್...

ಮಂಗಳೂರು - ಚೆನೈ ಭಾಂಧವ್ಯ

Image
ಭಾರತ ದೇಶದ ನಾಲ್ಲ್ಕು ಮಹಾ ನಗರಗಳಲ್ಲಿ ಚೆನೈ ಒಂದು. ಕರಾವಳಿ ನಗರವಾದ ಮಂಗಳೂರು ಮತ್ತು ದೂರದ ಚೆನೈ ಗೆ ನೇರವಾದ ಸಂಬಂಧವಿದೆ.ಅನೇಕ ದಶಕಗಳಿಂದ ಈ ಭಾಗ ಚೆನೈ ಎಂದರೆ ಆಗಿನ ಮದ್ರಾಸ್ ಗವರ್ನರ್ ಆಳ್ವಿಕೆಯ ನೇರ ಆಡಳಿತಕ್ಕೆ ಒಳಪಟ್ಟಿತ್ತು.! ದೇಶ ಸ್ವಾತಂತ್ರ್ಯ ಪಡೆದ ಮೇಲು ಇದು ಮುಂದುವರೆದಿತ್ತು. ಈ ನಂಟಿನ ಅನೇಕ ಕುರುಹುಗಳು ಇಂದಿಗೂ ಕಾಣ ಸಿಗುತ್ತವೆ. ಮೀನುಗಾರಿಕೆಗೆ ಹುಟ್ಟಿದ ಸುಂದರ ಕರಾವಳಿ ನಾಡು ಚೆನೈ.ತಮಿಳುನಾಡಿನ ರಾಜಧಾನಿಯಾದ ಚೆನೈಗೆ ಸುಮಾರು 369 ವರ್ಷಗಳ ಇತಿಹಾಸವಿದೆ.ವಿಜಯ ನಗರ ಅರಸರು ಇದನ್ನು ಆಳಿದ ಬಗ್ಗೆ ಉಲ್ಲೇಖವಿದೆ.1639 ರ ಆಗಸ್ಟ್ 22 ರ0ದು ಇಂಗ್ಲೆಡಿನ ಫ್ರಾನ್ಸಿಸ್ ಎಂಬಾತ ಆಗ ಈ ಪ್ರಾಂತವನ್ನು ಆಳುತ್ತಿದ್ದ ಚೆನ್ನಪ್ಪ ನಾಯ್ಕರ್ ಎಂಬತನಿಂದ ಮದ್ರಾಸ್ ಪ್ರಾಂತವನ್ನು ಕಟ್ಟಲು ಅನುಮತಿ ಪಡೆದ ದಾಖಲೆಗಳು ಲಭ್ಯವಾಗಿವೆ. ಈ ಬಾರಿ ಈ ಚೆನೈ ಗೆ 370 ನೇ ಹುಟ್ಟು ಹಬ್ಬದ ಸ0ಭ್ರಮ.ಕಾಲಂತರದಲ್ಲಿ ಆನೇಕ ಹೆಸರುಗಳನ್ನು ಪಡೆದ ಚೆನೈ 1996 ರಲ್ಲಿ ಮತ್ತೆ ತನ್ನ ಮೂಲ ನಾಮಕ್ಕೆ ಮರು ನಾಮಕರಣ ಪಡೆಯಿತು.

ಸಂತ ಅಲೋಸಿಯಸ್ ಕಾಲೇಜು (St.Aloysius Collage)

Image
ಪಶ್ಚಿಮದ ಅರಬ್ಬೀ ಸಮುದ್ರ ತೀರದಲ್ಲಿ ವಿಶಾಲವಾಗಿ ಚಾಚಿರುವ ಸುಂದರ ನಗರ ಮಂಗಳೂರು.ಕೇರಳದ ಕಾಸರಗೋಡಿನಿಂದ ಉತ್ತರದ ಕಾರವಾರದ 370 ಕೀ. ಮೀ ಉದ್ದದ ಕರಾವಳಿ ಪ್ರದೇಶಕ್ಕೆ ಇದು ಹೆಬ್ಬಾಗಿಲು.ಇಲ್ಲಿನ ಜನ ಸುಶಿಕ್ಷಿತರು,ಬುದ್ದಿವಂತರು - ಸಂಸ್ಕೃತಿ ಉಳ್ಳವರು ಎಂದು ದೇಶ ವಿದೇಶಗಳಲ್ಲಿ ಮನೆಮಾತಗಿದ್ದಾರೆ.ಇದಕ್ಕೆ ಕಾರಣ ಶಿಕ್ಷಣ ಮತ್ತು ವಿದ್ಯಾಭ್ಯಾಸ.ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಕೆ.ಎಸ್.ಹೆಗ್ದೆ,ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇಲ್ಲಿನ ಹಳೇ ವಿದ್ಯಾರ್ಥಿಗಳು..!ಇಲ್ಲಿಂದ ಕಲಿತ ಅನೇಕರು ದೇಶವಿದೇಶಗಳಲ್ಲಿ ರಾಜಕೀಯ ಮತ್ತ್ತು ಉದ್ಯಮದಲ್ಲಿ ಹೆಸರು ಪಡೆದ್ದಾರೆ.ಇದರ ದೊಡ್ಡ ಪಾಲು ಸಂತ ಅಲೋಸಿಯಸ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಕರಾವಳಿಯ ಸುಂದರ ನಗರ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಇಡೀ ನಗರಕ್ಕೆ ಕಿರೀಟದಂತಿರುವ ಈ ಅಲೋಸಿಯಸ್ ಕಾಲೇಜು, ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಂದು ಹೆಮ್ಮೆ.ಇಲ್ಲಿನ ಸುಮಾರು 40 ಎಕರೆ ಪ್ರದೇಶದಲ್ಲಿ ಹರಡಿದ್ದು, ಕಳೆದ 130 ವರ್ಷಗಳಿಂದ ಬಡವ - ಬಲ್ಲಿದ ಎಂಬ ಬೇದ ಭಾವ ಇಲ್ಲದೆ ಶೈಕ್ಷಣಿಕ ಸೇವೆ ನೀಡುತ್ತ ವಿದ್ಯಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಈ ಮಹಾನ್ ಸಂಸ್ಥೆಯ ಹಿನ್ನೆಲೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ... 1878 ರಲ್ಲಿ ಈ ಪ್ರದೇಶದಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ದೂರದ ಯುರೋಪ್ ನಿಂದ...